ತಾಲ್ಲೂಕಿನ ಚನ್ನಕಲ್ ಗ್ರಾಮದ ಎನ್. ಗುರೇಶ್ ಮತ್ತು ಬಂಗಾರಪೇಟೆ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದ ಎನ್. ಸೌಮ್ಯಾ ಅವರ ವಿವಾಹ ನಿಶ್ಚಯವಾಗಿತ್ತು. ಗುರುಹಿರಿಯರ ಸಮ್ಮುಖದಲ್ಲಿ ಶನಿವಾರ ಆರತಕ್ಷತೆ ಹಾಗೂ ಭಾನುವಾರ ಬೆಳಿಗ್ಗೆ ವಿವಾಹ ಮುಹೂರ್ತ ನಡೆಯಲು ಇಲ್ಲಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಎಲ್ಲ ಸಿದ್ಧತೆ ಮುಗಿದಿದ್ದವು. ಆದರೆ ರಾತ್ರಿಯಾದರೂ ವಧು ಮತ್ತು ಅವರ ಕುಟುಂಬದವರ ಪತ್ತೆ ಇಲ್ಲ. ಗಾಬರಿಯಾದ ವರನ ಕುಟುಂಬದವರು ವಿಚಾರಿಸಿದಾಗ ವಧು ನಾಪತ್ತೆಯಾಗಿದ್ದು ಗೊತ್ತಾಯಿತು.