‘ಮಹಿಳೆಯ ಕ್ಯಾಬ್ ಬುಕ್ ಮಾಡಿದ್ದ ವೇಳೆ ಮೊಬೈಲ್ ಸಂಖ್ಯೆಯನ್ನು ಬರೆದುಕೊಂಡಿದ್ದ ಆರೋಪಿ, ಬಾಲ್ಯ ಸ್ನೇಹಿತ ಎಂದು ಮೆಸೇಜ್ ಹಾಕಿದ್ದ. ತಾನು ಆರ್ಥಿಕವಾಗಿ ತೊಂದರೆಯಲ್ಲಿದ್ದೇನೆ. ಹಣಕಾಸು ನೆರವು ನೀಡುವಂತೆ ಮೆಸೇಜ್ನಲ್ಲಿ ಕೋರಿದ್ದ. ಅದನ್ನು ನಂಬಿದ ಮಹಿಳೆ ಹಂತ ಹಂತವಾಗಿ ₹ 22 ಲಕ್ಷ ನೀಡಿದ್ದರು. ಈ ಹಣವನ್ನು ಮೋಜು ಮಸ್ತಿಗೆ ಬಳಸುತ್ತಿದ್ದ. ಹಣ ಪಡೆದುಕೊಂಡಿದ್ದು ಗೆಳೆಯ ಅಲ್ಲ, ಕ್ಯಾಬ್ ಚಾಲಕ ಎಂದು ತಿಳಿದ ಮೇಲೆ ಹಣ ವಾಪಸ್ ನೀಡುವಂತೆ ಮಹಿಳೆ ಕೇಳಿದ್ದರು. ಅದಕ್ಕೆ ಆತ ಒಪ್ಪದೇ ನಿಮ್ಮ ಹಾಗೂ ಸ್ನೇಹಿತನ ವಿಚಾರವನ್ನು ಪತಿಗೆ ತಿಳಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಇಂದಿರಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು’.