<p><strong>ಬೆಂಗಳೂರು:</strong> ಫೇಸ್ಬುಕ್ನಲ್ಲಿ ಪರಿಚಯವಾಗಿ ಸುಬ್ರಮಣ್ಯ ಎಂಬುವರನ್ನು ಬ್ಲ್ಯಾಕ್ಮೇಲ್ ಮಾಡಿ ಚಿನ್ನದ ಸರ ಹಾಗೂ ನಗದು ಕಿತ್ತುಕೊಂಡಿದ್ದ ಮೂವರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.</p>.<p>ಸ್ಥಳೀಯ ನಿವಾಸಿಗಳಾದ ಅಕ್ಷಯ್, ಕಿರಣ್ ಹಾಗೂ ಮನು ಬಂಧಿತರು.</p>.<p>‘ಕೋಣನಕುಂಟೆ ನಿವಾಸಿ ಸುಬ್ರಮಣ್ಯ ಅವರ ಜೊತೆ ಫೇಸ್ಬುಕ್ನಲ್ಲಿ ಚಾಟಿಂಗ್ ಮಾಡಲಾರಂಭಿಸಿದ್ದ ಆರೋಪಿಗಳು, ‘ಪರಿಚಯಸ್ಥ ಯುವತಿ ಇದ್ದಾಳೆ. ನೀನು ಬಂದರೆ ಆಕೆ ಜೊತೆ ದಿನ ಕಳೆಯಬಹುದು’ ಎಂಬುದಾಗಿ ಜ. 4ರಂದು ಬೆಳಿಗ್ಗೆ ಹೇಳಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಅವರ ಮಾತು ನಂಬಿದ್ದ ಸುಬ್ರಮಣ್ಯ, ಹುಳಿಮಾವು ಬಳಿ ರಾತ್ರಿ ಬಂದಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು, ‘ನಾವು ಪೊಲೀಸರು. ನೀನು ಯುವತಿಯನ್ನು ಅತ್ಯಾಚಾರ ಮಾಡಲು ಬಂದಿದ್ದಿಯಾ ಎಂಬ ಮಾಹಿತಿ ಇದೆ. ₹50 ಸಾವಿರ ಕೊಟ್ಟರೆ ಬಿಟ್ಟು ಕಳುಹಿಸುತ್ತೇವೆ. ಇಲ್ಲದಿದ್ದರೆ, ಬಂಧಿಸಿ ಠಾಣೆಗೆ ಕರೆದೊಯ್ಯುತ್ತೇವೆ’ ಎಂದಿದ್ದರು. ಭಯಗೊಂಡಿದ್ದ ಸುಬ್ರಮಣ್ಯ, ಮನೆಗೆ ಕರೆದುಕೊಂಡು ಹೋಗಿ ಚಿನ್ನದ ಸರ ಹಾಗೂ ₹2 ಸಾವಿರ ನಗದು ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ಹೆಚ್ಚಿನ ಹಣ ಕೇಳಿದ್ದರು’</p>.<p>‘ಸ್ನೇಹಿತನಿಗೆ ವಿಷಯ ತಿಳಿಸಿದ್ದ ಸುಬ್ರಮಣ್ಯ, ₹20 ಸಾವಿರ ಸಾಲ ಕೇಳಿದ್ದರು. ಆ ಸ್ನೇಹಿತನೇ ಠಾಣೆಗೆ ವಿಷಯ ತಿಳಿಸಿದ್ದ. ಹೊಯ್ಸಳ ವಾಹನದಲ್ಲಿ ಸಿಬ್ಬಂದಿ ಸ್ಥಳಕ್ಕೆ ಹೋಗುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದರು. ಅವರ ಬಳಸಿದ್ದ ಜೂಮ್ ಕಾರು ಆಧರಿಸಿ ಮೂವರನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಫೇಸ್ಬುಕ್ನಲ್ಲಿ ಪರಿಚಯವಾಗಿ ಸುಬ್ರಮಣ್ಯ ಎಂಬುವರನ್ನು ಬ್ಲ್ಯಾಕ್ಮೇಲ್ ಮಾಡಿ ಚಿನ್ನದ ಸರ ಹಾಗೂ ನಗದು ಕಿತ್ತುಕೊಂಡಿದ್ದ ಮೂವರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.</p>.<p>ಸ್ಥಳೀಯ ನಿವಾಸಿಗಳಾದ ಅಕ್ಷಯ್, ಕಿರಣ್ ಹಾಗೂ ಮನು ಬಂಧಿತರು.</p>.<p>‘ಕೋಣನಕುಂಟೆ ನಿವಾಸಿ ಸುಬ್ರಮಣ್ಯ ಅವರ ಜೊತೆ ಫೇಸ್ಬುಕ್ನಲ್ಲಿ ಚಾಟಿಂಗ್ ಮಾಡಲಾರಂಭಿಸಿದ್ದ ಆರೋಪಿಗಳು, ‘ಪರಿಚಯಸ್ಥ ಯುವತಿ ಇದ್ದಾಳೆ. ನೀನು ಬಂದರೆ ಆಕೆ ಜೊತೆ ದಿನ ಕಳೆಯಬಹುದು’ ಎಂಬುದಾಗಿ ಜ. 4ರಂದು ಬೆಳಿಗ್ಗೆ ಹೇಳಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಅವರ ಮಾತು ನಂಬಿದ್ದ ಸುಬ್ರಮಣ್ಯ, ಹುಳಿಮಾವು ಬಳಿ ರಾತ್ರಿ ಬಂದಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು, ‘ನಾವು ಪೊಲೀಸರು. ನೀನು ಯುವತಿಯನ್ನು ಅತ್ಯಾಚಾರ ಮಾಡಲು ಬಂದಿದ್ದಿಯಾ ಎಂಬ ಮಾಹಿತಿ ಇದೆ. ₹50 ಸಾವಿರ ಕೊಟ್ಟರೆ ಬಿಟ್ಟು ಕಳುಹಿಸುತ್ತೇವೆ. ಇಲ್ಲದಿದ್ದರೆ, ಬಂಧಿಸಿ ಠಾಣೆಗೆ ಕರೆದೊಯ್ಯುತ್ತೇವೆ’ ಎಂದಿದ್ದರು. ಭಯಗೊಂಡಿದ್ದ ಸುಬ್ರಮಣ್ಯ, ಮನೆಗೆ ಕರೆದುಕೊಂಡು ಹೋಗಿ ಚಿನ್ನದ ಸರ ಹಾಗೂ ₹2 ಸಾವಿರ ನಗದು ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ಹೆಚ್ಚಿನ ಹಣ ಕೇಳಿದ್ದರು’</p>.<p>‘ಸ್ನೇಹಿತನಿಗೆ ವಿಷಯ ತಿಳಿಸಿದ್ದ ಸುಬ್ರಮಣ್ಯ, ₹20 ಸಾವಿರ ಸಾಲ ಕೇಳಿದ್ದರು. ಆ ಸ್ನೇಹಿತನೇ ಠಾಣೆಗೆ ವಿಷಯ ತಿಳಿಸಿದ್ದ. ಹೊಯ್ಸಳ ವಾಹನದಲ್ಲಿ ಸಿಬ್ಬಂದಿ ಸ್ಥಳಕ್ಕೆ ಹೋಗುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದರು. ಅವರ ಬಳಸಿದ್ದ ಜೂಮ್ ಕಾರು ಆಧರಿಸಿ ಮೂವರನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>