ಸಾರ್ವಜನಿಕರ ವಾಹನ ನಿಲ್ಲಿಸಲು ನಿಗದಿಯಾಗಿರುವ ಜಾಗದಲ್ಲೂ ಅಂಗಡಿಗಳನ್ನು ತೆರೆಯಲಾಗಿದೆ. ಈ ಕಾರಣದಿಂದ ವಾಹನ ನಿಲ್ಲಿಸಲು ಬಹಳ ತೊಂದರೆಯಾಗಿದೆ. ಇರುವ ಜಾಗದಲ್ಲಿ ವಾಹನ ನಿಲ್ಲಿಸಲು ಯತ್ನಿಸಿದರೆ, ಅಲ್ಲಿರುವ ಕೆಲವರು ದರ್ಪ ತೋರುತ್ತಾರೆ. ಸಂಚಾರ ಪೊಲೀಸರು ಈ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ. ಈ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ.