‘ಬಳಿಕ ಸ್ಥಳ ಪರಿಶೀಲನೆ ನಡೆದು, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಒತ್ತುವರಿ ಆಗಿರುವುದು, ಅಕ್ರಮವಾಗಿ ನಿವೇಶನ ಮಾಡಿರುವ ಕುರಿತು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಬಳಿಕಸದರಿ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ, ಸ್ಥಳಕ್ಕೆ ಯಾವುದೇ ರಕ್ಷಣೆ ಇಲ್ಲದಿದ್ದರಿಂದ ಜಾಗ ಅತಿಕ್ರಮಣ ಆಗುತ್ತಲೇ ಇದೆ’ ಎಂದು ಎಂ.ಬಾಬು ದೂರಿದರು.