ರಂಗಕರ್ಮಿ ಎಸ್.ಎನ್. ಸೇತುರಾಮ್ ಮಾತನಾಡಿ, ‘ಖಾಸಗಿ ಶಿಕ್ಷಣ ಸಂಸ್ಥೆಗಳು ಟ್ರಸ್ಟ್ನ ಹೆಸರಿನಲ್ಲಿ ಬೇರೆಯದೇ ಲೆಕ್ಕವನ್ನು ಸೃಷ್ಟಿಸಿ, ಪ್ರತಿವರ್ಷ ನಷ್ಟ ಎಂದು ತೋರಿಸುತ್ತಿವೆ. ಅವುಗಳ ಈ ಲೆಕ್ಕವು ಜನಸಾಮಾನ್ಯರಿಗೆ ಅರ್ಥವಾಗದ ಕಾರಣ ಅವರು ಬೇರೆಯದೇ ರೀತಿಯಲ್ಲಿ ಗ್ರಹಿಸುತ್ತಿದ್ದಾರೆ. ಪ್ರಾಮಾಣಿಕತೆಗೆ ಗೌರವ ಬರುವುದು ನಿಧಾನ. ಆದರೆ, ಯಾವತ್ತಿಗೂ ಇದ್ದೇ ಇರುತ್ತದೆ‘ ಎಂದರು.