ಮುಕ್ತಕಗಳ ರಚನೆಕಾರಕೃಷ್ಣಕವಿ, ‘ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ ಓದಿದ ಬಳಿಕ ಮುಕ್ತಕಗಳನ್ನು ಬರೆಯುವ ಆಸೆ ಗರಿಗೆದರಿತ್ತು. ಆದರೆ, ಆ ಆಸೆ ಇತ್ತೀಚೆಗೆ ಪೂರ್ಣಗೊಂಡಿತು. ನನ್ನ ಮುಕ್ತಕಗಳನ್ನು ಓದಿದವರೆಲ್ಲಾ ಬಹಳವಾಗಿ ಮೆಚ್ಚಿ, ಅವುಗಳನ್ನು ಕೃತಿಯ ರೂಪದಲ್ಲಿ ತರುವಂತೆ ಪ್ರೋತ್ಸಾಹಿಸಿದರು. ಅವರ ಮೆಚ್ಚುಗೆ ಮತ್ತು ಪ್ರೀತಿಯೇ ಈ ಕೃತಿ ಹೊರಬರಲು ಕಾರಣ’ ಎಂದು ಹೇಳಿದರು.