ಬೆಂಗಳೂರು: ‘ಕವಿ, ಸಾಹಿತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಬರಹಗಳ ಸ್ವರೂಪ ಭಿನ್ನವಾದರೂ, ಜೋಡಿ ಚಕ್ರಗಳಾಗಿ ನಾಡದೇವಿಯ ರಥ ಎಳೆದಿದ್ದಾರೆ. ಅವರಲ್ಲಿ ನಾನೂ ಒಬ್ಬನಾಗಿರುವುದು ನನ್ನ ಸುದೈವ’ಎಂದು ಕವಿ ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯು ಉದಯಭಾನು ಕಲಾ ಸಂಘದಲ್ಲಿ ಆಯೋಜಿಸಿದ್ದಎಚ್.ಎಸ್.ವೆಂಕಟೇಶಮೂರ್ತಿ ಅವರ ಕುರಿತಾಗಿ ಲೇಖಕ ನೇ.ಭ.ರಾಮಲಿಂಗಶೆಟ್ಟಿ ಬರೆದಿರುವ ‘ಮಳೆ ನಿಂತ ಮೇಲೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್,‘ಎಚ್ಎಸ್ವಿ ಅವರ ಕುರಿತಾದ ಈ ಕೃತಿ, ಒಂದು ಸಾಂಸ್ಕೃತಿಕ ದಾಖಲೆ. ಕನ್ನಡ ಮತ್ತು ಭಾರತದ ಪರಂಪರೆಯ ಅನುಸಂಧಾನಕ್ಕೆ ಇದು ನೆರವಾಗಲಿದೆ' ಎಂದರು.