‘ಸಮಕಾಲೀನ ರಾಜಕಾರಣದ’ ಬಗ್ಗೆ ಮಾತನಾಡಿದ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ನಾರಾಯಣ್, ‘ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಧರ್ಮ ಆಧಾರಿತ ರಾಷ್ಟ್ರ ನಿರ್ಮಿಸುವ ಕೆಲವರ ಪ್ರಯತ್ನಕ್ಕೆ ಇಂದು ಫಲ ಸಿಗುತ್ತಿದೆ. 1950ರಲ್ಲಿ ಧರ್ಮ ಆಧಾರಿತ ರಾಷ್ಟ್ರೀಯತೆಯನ್ನು ತಿರಸ್ಕರಿಸಿದ್ದ ಇಲ್ಲಿನ ಶೇ 99ರಷ್ಟು ಜನ ಇಂದು ಅದನ್ನು ಸ್ವೀಕರಿಸುತ್ತಿದ್ದಾರೆ. ವಿವಿಧತೆಯಿಂದ ಕೂಡಿರುವ ನಮ್ಮ ದೇಶದಲ್ಲಿ ಒಂದು ಸಿದ್ಧಾಂತದ ಕೆಳಗೆ, ಒಂದು ವರ್ಗ ಅಥವಾ ಸಂಪ್ರದಾಯ, ನಂಬಿಕೆಗಳ ಅನುಗುಣವಾಗಿ ದೇಶ ನಿರ್ಮಿಸುವುದಕ್ಕೆ ಸಾಧ್ಯವಿಲ್ಲ’ ಎಂದು ತಿಳಿಸಿದರು.