‘ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿಯ ನಾಗಯ್ಯನಪಾಳ್ಯದಲ್ಲಿ ರೈಲ್ವೆ ಇಲಾಖೆಯವರು ನೀರು ಶುದ್ಧೀಕರಣ ಘಟಕ ಸ್ಥಾಪಿಸಿದ್ದು ಅಲ್ಲಿ ತೊಟ್ಟಿಯೊಂದು ಇದೆ. ಅದರ ಸುತ್ತಲೂ ಕಾಂಪೌಂಡ್ ಕೂಡ ಹಾಕಲಾಗಿದೆ. ಹೀಗಿದ್ದರೂ ಮೃತ ಬಾಲಕ ಹಾಗೂ ಆತನ ಸ್ನೇಹಿತರು ಅದರಲ್ಲಿ ಈಜಾಡಿ, ಬಳಿಕ ಮೀನು ಹಿಡಿದುಕೊಂಡು ಬರಲು ಅಲ್ಲಿಗೆ ಹೋಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.