ಎಚ್ಎಸ್ಆರ್ ಬಡಾವಣೆಯಲ್ಲಿ ಸುಜಿತ್ ಕುಮಾರ್ ಮತ್ತು ಇತರರು ಹೊಸ ಮನೆ ನಿರ್ಮಿಸಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಗುತ್ತಿಗೆದಾರ ಪುಟ್ಟೇನಹಳ್ಳಿಯ ವೇಣುಗೋಪಾಲ್ ಎಸ್. ಎಂಬುವವರ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿ, ವಿದ್ಯುತ್ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 2.30 ಲಕ್ಷ ಲಂಚ ನೀಡುವಂತೆ ಆನಂದ್ ಬೇಡಿಕೆ ಇಟ್ಟಿದ್ದರು.