ಪಾಂಚಜನ್ಯ ವಿದ್ಯಾಪೀಠ ವೆಲ್ಫೇರ್ ಟ್ರಸ್ಟ್ ಅಧೀನದ ಪಿವಿಪಿ ಪಾಲಿಟೆಕ್ನಿಕ್ನಲ್ಲಿ ಪ್ರಯೋಗಾಲಯ ಸಹಾಯಕರಾಗಿದ್ದ ಎಂ.ಎನ್. ಶ್ರೀನಿವಾಸ ದೀರ್ಘ ಕಾಲದಿಂದ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದರು. ಅವರನ್ನು ಕೆಲಸದಿಂದ ವಜಾಗೊಳಿಸಲು ಆಡಳಿತ ಮಂಡಳಿ ಪ್ರಕ್ರಿಯೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಸಹೋದ್ಯೋಗಿಯನ್ನು ಸಂಪರ್ಕಿಸಿದ್ದ ಪ್ರಕಾಶ್, ₹ 3 ಲಕ್ಷ ಲಂಚ ನೀಡಿದರೆ ಶಿಸ್ತುಕ್ರಮದಿಂದ ಪಾರು ಮಾಡುವುದಾಗಿ ತಿಳಿಸಿದ್ದರು. ₹ 25,000 ಮೊತ್ತವನ್ನು ಮೊದಲ ಕಂತಿನಲ್ಲಿ ಪಡೆದುಕೊಂಡಿದ್ದರು.