<p>ಬೆಂಗಳೂರು: ದೇಶದ ಅಭಿವೃದ್ಧಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಪಾತ್ರ ದೊಡ್ಡದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.</p>.<p>ಎಫ್ಕೆಸಿಸಿಐ ಎಂ.ವಿ ಸಭಾಂಗಣದಲ್ಲಿ ಉಬುಂಟು, ಎಫ್ಕೆಸಿಸಿಸಿಐ ಮತ್ತು ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟರ್ಪ್ರಿನರ್ಶಿಪ್ (ಗೇಮ್) ಸಹಯೋಗದಲ್ಲಿ ಮಹಿಳಾ ಸ್ವಾಮ್ಯದ ಸೂಕ್ಷ್ಮ ವ್ಯವಹಾರಗಳನ್ನು ಬೆಂಬಲಿಸುವ 6 ತಿಂಗಳ ವೇಗವರ್ಧಕ ಕಾರ್ಯಕ್ರಮವಾದ ‘ಎಕ್ಸಲರೇಟರ್ ಬೆಂಗಳೂರು’ (ಎಕ್ಸ್ಬಿ) ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉಬುಂಟು ಸಂಸ್ಥಾಪಕಿ ರತ್ನಪ್ರಭಾ ಮಾತನಾಡಿ, ‘ಪ್ರತಿ ಜಿಲ್ಲೆಯಲ್ಲೂ ಮಹಿಳಾ ಉದ್ಯಮಿಗಳನ್ನು ಮುಖ್ಯ ವೇದಿಕೆಗೆ ತರುವ ಕೆಲಸವನ್ನು ಉಬುಂಟು ಮಾಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಪ್ರತಿ ಜಿಲ್ಲೆಗೂ ₹1 ಲಕ್ಷದಂತೆ ₹30 ಲಕ್ಷಗಳನ್ನು ಉಬುಂಟು ಒಕ್ಕೂಟಕ್ಕೆ ಮೀಸಲಿಟ್ಟರೆ, ಸರ್ಕಾರ ಮಾಡಬೇಕಿರುವ ಬಹುತೇಕ ಕೆಲಸವನ್ನು ನಮ್ಮ ಒಕ್ಕೂಟ ಮಾಡುತ್ತಿದೆ’ ಎಂದರು.</p>.<p>ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಗೇಮ್ನ ಸಹ-ಸಂಸ್ಥಾಪಕ ಮದನ್ ಪಡಕಿ, ಗೇಮ್ನ ಸಹ ಸಂಸ್ಥಾಪಕ ಮದನ್ ಪ್ರಸಾದ್, ಎಸ್ಐಡಿಬಿಐ ಉಪ ವ್ಯವಸ್ಥಾಪಕ ವಿ. ಸತ್ಯ ವೆಂಕಟರಾವ್ ಇದ್ದರು. ಕಾರ್ಯಕ್ರಮದ ಬಳಿಕ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳ ಕುರಿತು ವಿಚಾರಗೋಷ್ಠಿ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ದೇಶದ ಅಭಿವೃದ್ಧಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಪಾತ್ರ ದೊಡ್ಡದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.</p>.<p>ಎಫ್ಕೆಸಿಸಿಐ ಎಂ.ವಿ ಸಭಾಂಗಣದಲ್ಲಿ ಉಬುಂಟು, ಎಫ್ಕೆಸಿಸಿಸಿಐ ಮತ್ತು ಗ್ಲೋಬಲ್ ಅಲೈಯನ್ಸ್ ಫಾರ್ ಮಾಸ್ ಎಂಟರ್ಪ್ರಿನರ್ಶಿಪ್ (ಗೇಮ್) ಸಹಯೋಗದಲ್ಲಿ ಮಹಿಳಾ ಸ್ವಾಮ್ಯದ ಸೂಕ್ಷ್ಮ ವ್ಯವಹಾರಗಳನ್ನು ಬೆಂಬಲಿಸುವ 6 ತಿಂಗಳ ವೇಗವರ್ಧಕ ಕಾರ್ಯಕ್ರಮವಾದ ‘ಎಕ್ಸಲರೇಟರ್ ಬೆಂಗಳೂರು’ (ಎಕ್ಸ್ಬಿ) ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಉಬುಂಟು ಸಂಸ್ಥಾಪಕಿ ರತ್ನಪ್ರಭಾ ಮಾತನಾಡಿ, ‘ಪ್ರತಿ ಜಿಲ್ಲೆಯಲ್ಲೂ ಮಹಿಳಾ ಉದ್ಯಮಿಗಳನ್ನು ಮುಖ್ಯ ವೇದಿಕೆಗೆ ತರುವ ಕೆಲಸವನ್ನು ಉಬುಂಟು ಮಾಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಪ್ರತಿ ಜಿಲ್ಲೆಗೂ ₹1 ಲಕ್ಷದಂತೆ ₹30 ಲಕ್ಷಗಳನ್ನು ಉಬುಂಟು ಒಕ್ಕೂಟಕ್ಕೆ ಮೀಸಲಿಟ್ಟರೆ, ಸರ್ಕಾರ ಮಾಡಬೇಕಿರುವ ಬಹುತೇಕ ಕೆಲಸವನ್ನು ನಮ್ಮ ಒಕ್ಕೂಟ ಮಾಡುತ್ತಿದೆ’ ಎಂದರು.</p>.<p>ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಗೇಮ್ನ ಸಹ-ಸಂಸ್ಥಾಪಕ ಮದನ್ ಪಡಕಿ, ಗೇಮ್ನ ಸಹ ಸಂಸ್ಥಾಪಕ ಮದನ್ ಪ್ರಸಾದ್, ಎಸ್ಐಡಿಬಿಐ ಉಪ ವ್ಯವಸ್ಥಾಪಕ ವಿ. ಸತ್ಯ ವೆಂಕಟರಾವ್ ಇದ್ದರು. ಕಾರ್ಯಕ್ರಮದ ಬಳಿಕ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳ ಕುರಿತು ವಿಚಾರಗೋಷ್ಠಿ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>