ವಿವಾದ: ಈ ಮೊದಲಿದ್ದ ಸರಸ್ವತಿ ವಿಗ್ರಹದ ಕೈಯೊಂದು ತುಂಡಾದ ಕಾರಣ ಆ ವಿಗ್ರಹವನ್ನು ಬದಲಿಸಿ, ಹೊಸ ವಿಗ್ರಹ ಸ್ಥಾಪನೆಗೆ ಸಿದ್ಧತೆ ನಡೆದಿತ್ತು. ಒಮ್ಮಿಂದೊಮ್ಮೆಲೆ ಅದೇ ಸ್ಥಳದಲ್ಲಿ ಕೆಲವು ವ್ಯಕ್ತಿಗಳುಬುದ್ಧನ ವಿಗ್ರಹವನ್ನು ತಂದು ಕೂರಿಸಿದ್ದರಿಂದ ಭಾರಿ ವಿವಾದ ಉಂಟಾಗಿತ್ತು. ಗದ್ದಲ ಎದ್ದ ಕಾರಣ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು.