ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ, ‘ರಾಜಕಾರಣ ಹಣದ ವ್ಯವಹಾರದ ಚಕ್ರವ್ಯೂಹದಲ್ಲಿ ಸಿಲುಕಿದೆ. ಮತ ನೀಡುವವರು ಹಣ ಕೇಳುವ ಕಾರಣದಿಂದ, ರಾಜಕಾರಣಿಗಳು ಹಣ ಮಾಡಲೇಬೇಕಾಗಿದೆ. ವ್ಯಾಪಾರಸ್ಥರು ಇದನ್ನು ಬಂಡವಾಳವನ್ನಾಗಿಸಿಕೊಳ್ಳುತ್ತಿದ್ದಾರೆ. ಕೋಮುವಾದೀಕರಣ, ವಾಣಿಜ್ಯೀಕರಣ ಮತ್ತು ಭ್ರಷ್ಟಾಚಾರ ಇಂದಿನ ರಾಜಕಾರಣದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿವೆ. ಇವುಗಳನ್ನು ತೊಡೆದುಹಾಕುವ ಕಡೆಗೆ ಯುವಜನತೆ ಗಮನಹರಿಸಬೇಕು’ ಎಂದು ತಿಳಿಸಿದರು.