ಬೆಂಗಳೂರು: ಎಂಟನೇ ಮೈಲಿ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ಖಾಸಗಿ ಬಸ್ಸೊಂದು, ರಸ್ತೆ ಪಕ್ಕದಲ್ಲಿದ್ದ ನಿಲ್ದಾಣಕ್ಕೆ ನುಗ್ಗಿ ಪ್ರಯಾಣಿಕರಿಗೆ ಗುದ್ದಿದೆ. ಭಾನುವಾರ ಸಂಜೆ ನಡೆದಿರುವ ಈ ಅಪಘಾತದಲ್ಲಿ ಪ್ರಯಾಣಿಕ ಜ್ಞಾನಪ್ಪ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.