<p><strong>ಬೆಂಗಳೂರು:</strong> ಪ್ರಯಾಣ ದರ ಹೆಚ್ಚಳ ಮಾಡಬೇಡಿ...ಹೀಗೆಂದು ಬಹುಪಾಲು ಪ್ರಯಾಣಿಕರು ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಮತದಾನ ಮಾಡಿದರು. ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ (ಬಿಬಿಪಿವಿ) ಇಂಥದ್ದೊಂದು ಅಭಿಯಾನ ನಡೆಸಿತು.</p>.<p>ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿಂತವರಿಗೆ, ಬಸ್ಗಳಲ್ಲಿ ಪ್ರಯಾಣಿಸುವವರಿಗೆ ವೇದಿಕೆ ಸದಸ್ಯರು ಮತಪತ್ರ ನೀಡಿದರು. ಪ್ರಯಾಣಿಕರು ತಮ್ಮ ಆಯ್ಕೆಯನ್ನು ಗುರುತುಹಾಕಿ ಮತಪೆಟ್ಟಿಗೆಯಲ್ಲಿ ಹಾಕಿದರು. 95ರಷ್ಟು ಪ್ರಯಾಣಿಕರು ದರ ಏರಿಕೆ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p class="Subhead">ಏಕೆ ಈ ಮತದಾನ?: ‘ಡೀಸೆಲ್ ಬೆಲೆ ಏರಿಕೆ, ನಿರ್ವಹಣಾ ವೆಚ್ಚದ ಹೆಚ್ಚಳದ ಕಾರಣಗಳಿಂದಾಗಿ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಇತ್ತೀಚೆಗೆ ಬಸ್ ಪ್ರಯಾಣ ದರ ಏರಿಸಲು ಮುಂದಾಗಿದ್ದವು. ಕೊನೇ ಕ್ಷಣದಲ್ಲಿ ಆ ಆದೇಶಕ್ಕೆ ಮುಖ್ಯಮಂತ್ರಿ ತಡೆ ನೀಡಿದ್ದರು. ಮುಂದೆಯೂ ಬಸ್ ಪ್ರಯಾಣ ದರ ಏರಿಸಬಾರದು’ ಎಂಬ ಉದ್ದೇಶದಿಂದ ಈ ಮತದಾನ ಅಭಿಯಾನ ನಡೆಸಿದ್ದೇವೆ ಎಂದು ವೇದಿಕೆ ಸದಸ್ಯರು ಹೇಳಿದರು.</p>.<p class="Subhead">ಏನು ಮಾಡಬೇಕು?: ಬಿಎಂಟಿಸಿಗೆ ಸರ್ಕಾರ ಆರ್ಥಿಕ ಅನುದಾನ ನೀಡಬೇಕು. ದರವನ್ನು ಇಳಿಕೆ ಮಾಡುವ ಮೂಲಕ ಹೆಚ್ಚು ಜನ ಬಸ್ನಲ್ಲಿ ಪ್ರಯಾಣಿಸುವಂತೆ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.</p>.<p class="Subhead">ಮುಂಚೂಣಿಯಲ್ಲಿದ್ದವರು: ಮಹಿಳಾ ಕಾರ್ಮಿಕರ ಸಂಘಟನೆ, ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಖಾನೆ ಕಾರ್ಮಿಕರು, ಸಾಧನಾ ಮಹಿಳಾ ಸಂಘ, ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಯಾಣ ದರ ಹೆಚ್ಚಳ ಮಾಡಬೇಡಿ...ಹೀಗೆಂದು ಬಹುಪಾಲು ಪ್ರಯಾಣಿಕರು ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಮತದಾನ ಮಾಡಿದರು. ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ (ಬಿಬಿಪಿವಿ) ಇಂಥದ್ದೊಂದು ಅಭಿಯಾನ ನಡೆಸಿತು.</p>.<p>ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿಂತವರಿಗೆ, ಬಸ್ಗಳಲ್ಲಿ ಪ್ರಯಾಣಿಸುವವರಿಗೆ ವೇದಿಕೆ ಸದಸ್ಯರು ಮತಪತ್ರ ನೀಡಿದರು. ಪ್ರಯಾಣಿಕರು ತಮ್ಮ ಆಯ್ಕೆಯನ್ನು ಗುರುತುಹಾಕಿ ಮತಪೆಟ್ಟಿಗೆಯಲ್ಲಿ ಹಾಕಿದರು. 95ರಷ್ಟು ಪ್ರಯಾಣಿಕರು ದರ ಏರಿಕೆ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p class="Subhead">ಏಕೆ ಈ ಮತದಾನ?: ‘ಡೀಸೆಲ್ ಬೆಲೆ ಏರಿಕೆ, ನಿರ್ವಹಣಾ ವೆಚ್ಚದ ಹೆಚ್ಚಳದ ಕಾರಣಗಳಿಂದಾಗಿ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಇತ್ತೀಚೆಗೆ ಬಸ್ ಪ್ರಯಾಣ ದರ ಏರಿಸಲು ಮುಂದಾಗಿದ್ದವು. ಕೊನೇ ಕ್ಷಣದಲ್ಲಿ ಆ ಆದೇಶಕ್ಕೆ ಮುಖ್ಯಮಂತ್ರಿ ತಡೆ ನೀಡಿದ್ದರು. ಮುಂದೆಯೂ ಬಸ್ ಪ್ರಯಾಣ ದರ ಏರಿಸಬಾರದು’ ಎಂಬ ಉದ್ದೇಶದಿಂದ ಈ ಮತದಾನ ಅಭಿಯಾನ ನಡೆಸಿದ್ದೇವೆ ಎಂದು ವೇದಿಕೆ ಸದಸ್ಯರು ಹೇಳಿದರು.</p>.<p class="Subhead">ಏನು ಮಾಡಬೇಕು?: ಬಿಎಂಟಿಸಿಗೆ ಸರ್ಕಾರ ಆರ್ಥಿಕ ಅನುದಾನ ನೀಡಬೇಕು. ದರವನ್ನು ಇಳಿಕೆ ಮಾಡುವ ಮೂಲಕ ಹೆಚ್ಚು ಜನ ಬಸ್ನಲ್ಲಿ ಪ್ರಯಾಣಿಸುವಂತೆ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.</p>.<p class="Subhead">ಮುಂಚೂಣಿಯಲ್ಲಿದ್ದವರು: ಮಹಿಳಾ ಕಾರ್ಮಿಕರ ಸಂಘಟನೆ, ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಖಾನೆ ಕಾರ್ಮಿಕರು, ಸಾಧನಾ ಮಹಿಳಾ ಸಂಘ, ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದವರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>