ಸಂಘದ ಅಧ್ಯಕ್ಷ ರುದ್ರೇಗೌಡ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ‘ಜಲಮಂಡಳಿಯ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಜಲಪರಿವೀಕ್ಷಕರು, ಮಾಪಕ ಓದುಗರು, ಒಳಚರಂಡಿ ಕೆಲಸಗಾರರು ಸೇರಿ ಎಲ್ಲ ಸಿಬ್ಬಂದಿ ಹೊರಗೆ ಓಡಾಡಿ ಕೆಲಸ ಮಾಡಬೇಕಾದ ಅನಿವಾರ್ಯ ಇದೆ. ಇವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಕೋವಿಡ್-19 ವಿಮೆಯನ್ನು ಮಂಡಳಿಯ ನೌಕರರಿಗೂ ಅನ್ವಯಿಸಬೇಕು’ ಎಂದು ಕೋರಿದ್ದಾರೆ.