‘ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಿ.ಎ ಅವರನ್ನು ಸಿಲುಕಿಸಿ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದ ಆರೋಪಿ, ಇತರೆ ಆರೋಪಿಗಳ ಸಹಾಯ ಪಡೆದಿದ್ದ. ಆರೋಪಿ ರಾಹುಲ್, ಪಿಸ್ತೂಲ್ ಹಾಗೂ ಗುಂಡು ತೆಗೆದುಕೊಂಡು ಡಿ. 7ರಂದು ಕಬ್ಬನ್ ಪಾರ್ಕ್ ಉದ್ಯಾನಕ್ಕೆ ಬಂದಿದ್ದ. ಪಿಸ್ತೂಲ್ ಇರುವ ಬಗ್ಗೆ ಆರೋಪಿಗಳೇ ಠಾಣೆಗೆ ಮಾಹಿತಿ ನೀಡಿದ್ದರು. ದಾಳಿ ನಡೆಸಿದ್ದ ಸಿಬ್ಬಂದಿ, ಆರೋಪಿ ಸಮೇತ ಪಿಸ್ತೂಲ್ ಜಪ್ತಿ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.