ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ಬಿ.ಎಸ್. ರಾಘವೇಂದ್ರ ಭಟ್, ‘ಇದೇ 3ರಿಂದ ವ್ಯಾಸಪೂಜೆ, ಉತ್ತರ ಪೂಜಾ ವ್ಯಾಸಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ. ಈ ಚಾತುರ್ಮಾಸದ 90 ದಿನಗಳ ಕಾಲಾವಧಿಯಲ್ಲಿ ಪ್ರತಿನಿತ್ಯ ಅನ್ನಸಂತರ್ಪಣೆ, ವಿಶೇಷ ಪೂಜೆ, ಭಜನೆ, ಸತ್ಸಂಗ ಜರುಗಲಿವೆ. ಶ್ರೀಲಕ್ಷ್ಮಿನರಸಿಂಹ ಸ್ವಾಮಿಯ ಕಲ್ಯಾಣೋತ್ಸವ ಸೇವೆಯು ಪ್ರತಿದಿನ ಇರಲಿದೆ’ ಎಂದು ತಿಳಿಸಿದರು.