‘ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗಳನ್ನು ಸಿಯುಪಿಎ ಕೇಂದ್ರಕ್ಕೆ ವರ್ಗಾಯಿಸುವಾಗ ಪೊಲೀಸರು ಸರಿಯಾದ ಕಾರ್ಯ ವಿಧಾನ ಅನುಸರಿಸಿಲ್ಲ. ಆದರೆ, ಸಂತಾನೋತ್ಪತ್ತಿ ಕೇಂದ್ರದಲ್ಲಿ ನಾಯಿಗಳನ್ನು ಕ್ರೌರ್ಯವಾಗಿ ನಡೆಸಿಕೊಳ್ಳುತ್ತಿದ್ದ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು. ನ್ಯಾಯಾಲಯದ ಅನುಮತಿ ಪಡೆಯದಿದ್ದರೂ, ಕ್ರೌರ್ಯಕ್ಕೆ ಗುರಿಯಾಗುವ ನಾಯಿಗಳ ಹಿತಾಸಕ್ತಿ ಕಾಪಾಡುವುದು ಮುಖ್ಯ’ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.