‘ನಾಗಶೆಟ್ಟಿಹಳ್ಳಿ ನಿವಾಸಿ ಕುಮಾರ್, ಎಸ್ಬಿಐ ಶಾಖೆಯಲ್ಲಿ ಹಣ ಡ್ರಾ ಮಾಡಿಕೊಂಡಿದ್ದರು. ನಂತರ, ಸ್ನೇಹಿತನನ್ನು ಭೇಟಿಯಾಗಲು ಚೌಡೇಶ್ವರಿನಗರದ ಅಪೋಲೊ ಶಾಲೆ ಬಳಿ ಹೋಗಿದ್ದರು. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಮನೆಯೊಳಗೆ ತೆರಳಿದ್ದರು. ಕೆಲ ಹೊತ್ತಿನ ನಂತರ ವಾಪಸು ಬಂದು ನೋಡಿದಾಗ, ಕಾರಿನ ಗಾಜು ಒಡೆದು ಹಣ ಕದ್ದುಕೊಂಡು ಹೋಗಿರುವುದು ಗೊತ್ತಾಗಿದೆ’ ಎಂದೂ ತಿಳಿಸಿದರು.