ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಸು ಕಳೆದುಕೊಳ್ಳುವ ಸ್ಥಿತಿ ಬಾರದಿರಲಿ’

Last Updated 10 ನವೆಂಬರ್ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: 'ಕಲೆಯ ಹಿಂದೆ ಹೋಗಿ ಕಾಸು ಕಳೆದುಕೊಳ್ಳುವ ಪರಿಸ್ಥಿತಿ ನಿರ್ದೇಶಕಿ ಚಂಪಾ ಶೆಟ್ಟಿ ಮತ್ತು ಅವರ ತಂಡಕ್ಕೆ ಬರಬಾರದು...'

ಸಾಹಿತಿ ವೈದೇಹಿ ಅವರ ಮೂರು ಕಥೆಗಳನ್ನು ಆಧರಿಸಿದ 'ಅಮ್ಮಚಿಯೆಂಬ ನೆನಪು' ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ ಭಟ್ ಅವರು ಆಡಿದ ಮಾತು ಇದು. ಚಂಪಾ ಅವರು ಈ ಚಿತ್ರದ ನಿರ್ದೇಶಕಿ.

'ಅಮ್ಮಚಿಯೆಂಬ ನೆನಪು' ಚಿತ್ರದ ಪ್ರದರ್ಶನವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶನಿವಾರ ಆಯೋಜಿಸಿತ್ತು. ಚಿತ್ರದ ವೀಕ್ಷಣೆಗೆ ಭಟ್ ಅವರೂ ಬಂದಿದ್ದರು.

ಈ ಚಿತ್ರವನ್ನು ಜನ ಸಿನಿಮಾ ಮಂದಿರಗಳಿಗೆ ಹೋಗಿ ನೋಡಬೇಕು ಎಂದು ಭಟ್ ಮನವಿ ಮಾಡಿದರು. 'ಈ ಚಿತ್ರ ಒಂದು ಒಳ್ಳೆಯ ಪ್ರಯತ್ನ. ಸಂಸ್ಕೃತಿಯ ಮೂಟೆಯೇ ಈ ಚಿತ್ರದಲ್ಲಿ ಇದೆ. ಕರಾವಳಿಯ ದೃಶ್ಯಗಳನ್ನು ಇದರಲ್ಲಿ ಸುಂದರವಾಗಿ ತೋರಿಸಲಾಗಿದೆ' ಎಂದು ಮೆಚ್ಚುಗೆ ಸೂಚಿಸಿದರು.

ಆನ್‌ಲೈನ್‌ ಮೂಲಕ ಸಿನಿಮಾ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ನೀಡುವ 'ಬುಕ್‌ ಮೈ ಷೊ' ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ ಅನ್ವಯ ನಗರದ ಎರಡು ಮಾಲ್‌ಗಳಲ್ಲಿ ಮಾತ್ರ ಈ ಚಿತ್ರದ ಪ್ರದರ್ಶನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT