ಯಾಗದ ಸ್ಥಳದಲ್ಲಿ ಚಂಡಿಕಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸಲಾಗಿದೆ. 1,008 ಕಳಸಗಳ ಸ್ಥಾಪನೆ ಮಾಡಲಾಗಿದೆ. ಪ್ರತಿನಿತ್ಯ 375 ಋತ್ವಿಕರು ಬೆಳಿಗ್ಗೆ ಮತ್ತು ಸಂಜೆ ಗಣಪತಿ, ದುರ್ಗಾ, ಲಕ್ಷ್ಮೀನರಸಿಂಹ, ನವಗ್ರಹ, ಅಯ್ಯಪ್ಪ, ಸುಬ್ರಹ್ಮಣ್ಯ, ಸಂಹಿತಾ ಯಾಗ ಮಾಡುತ್ತಿದ್ದಾರೆ. ಗುರುಚರಿತೆ, ಸಪ್ತಶತಿ ಪಾರಾಯಣ, 130 ನವಾಕ್ಷರ ಜಪಗಳನ್ನು ಮಾಡುತ್ತಿದ್ದಾರೆ. ನಿತ್ಯವೂ ರಥೋತ್ಸವ, ಪ್ರಸಾದ ವಿನಿಯೋಗವಾಗುತ್ತಿದೆ. ಸುಮಾರು 1,500 ಜನ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದಾರೆ.