‘15 ವರ್ಷಗಳಿಂದ ನಗರದಲ್ಲಿ ವ್ಯವಹಾರ ನಡೆಸುತ್ತಿರುವ ಕಂಪನಿ ಮಾಲೀಕ ನಿತೇಶ್, ಅಪಾರ್ಟ್ಮೆಂಟ್ ಸಮುಚ್ಚಯ ಹಾಗೂ ವಿಲ್ಲಾ ನಿರ್ಮಾಣದ ನಕ್ಷೆ ತೋರಿಸಿ 50ಕ್ಕೂ ಹೆಚ್ಚು ಮಂದಿಯಿಂದ ಹಣ ಕಟ್ಟಿಸಿಕೊಂಡಿದ್ದರು. ಆ ನಂತರ ಕೆಲವೆಡೆ ಪಾಯವನ್ನಷ್ಟೇ ತೋಡಿ ಕೆಲಸ ಸ್ಥಗಿತಗೊಳಿಸಿದ್ದರೆ, ಮತ್ತೆ ಕೆಲವಡೆ ಕಟ್ಟಡಗಳನ್ನು ಅರ್ಧ ಕಟ್ಟಿ ಹಾಗೇ ಬಿಟ್ಟಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.