ಒಕ್ಕೂಟದ ಖಜಾಂಚಿ ಟಿ.ಸಿ. ವಿಜಯಕುಮಾರ್,‘ರಾಜ್ಯದಲ್ಲಿ 1,750 ಚಿಂಟ್ ಫಂಡ್ ಪ್ರವರ್ತಕರಿದ್ದು, ಲಕ್ಷಾಂತರ ಮಂದಿ ಹೂಡಿಕೆದಾರರಿದ್ದಾರೆ. ಈ ಕ್ಷೇತ್ರವನ್ನೇ ನಂಬಿಕೊಂಡು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಜಿಎಸ್ಟಿ ಹೆಚ್ಚಳ ಮಾಡಿರುವುದು, ಇವರೆಲ್ಲರ ಜೀವನದ ಮೇಲೆ ಬರೆ ಎಳೆದಂತಾಗಿದೆ’ ಎಂದು ದೂರಿದರು.