ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ‘ಶೈಕ್ಷಣಿಕ ಹಾಗೂ ರಜೆಗಳ ಅವಧಿ ನಿರ್ಣಯವು, ಆಳುವ ಸರ್ಕಾರದ ಜೊತೆಗಿನ ಬೇಡಿಕೆ–ನೀಡಿಕೆಯ ವಿಷಯವಾಗಬಾರದು. ಇದೊಂದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು ವೈಜ್ಞಾನಿಕ ಆಧಾರದಲ್ಲಿ ಅಧ್ಯಯನ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತಾಗಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.