ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಅಂಗವಾಗಿ ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಭಾವಾಗಿ ಶ್ರಮದಾನ ಮಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ‘ಸ್ವಚ್ಛ ಸರ್ವೇಕ್ಷಣ್–2023’ ಅಭಿಯಾನದಲ್ಲಿ ಸಿಎಂಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು , ಎನ್ಸಿಸಿ ಕೆಡೆಟ್ಗಳು, ಪೌರಕಾರ್ಮಿಕರ ಜೊತೆಗೆ ಬಿಟಿಎಂ ಲೇಔಟ್, ಕೆ.ಆರ್. ಪುರ, ಕೃಷ್ಣರಾಜ ಮಾರುಕಟ್ಟೆ, ಮಿಟ್ಟಿಗಾನ ಹಳ್ಳಿ ಸೇರಿದಂತೆ ಹಲವೆಡೆ ಶ್ರಮದಾನ ಮಾಡಿದರು.
ಬಾಗಲೂರು ಕೆರೆಯನ್ನು ದತ್ತು ಪಡೆದು ದೋಣಿ ವಿಹಾರ ಮತ್ತು ಹಸಿರು ವಲಯವಾಗಿ ಸಂರಕ್ಷಣೆ ಮಾಡುತ್ತಿರುವ ಸಿಎಂಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ಇಡೀ ದಿನ ಶ್ರಮದಾನ ಮಾಡುವುದರ ಮೂಲಕ ‘ನಗರದ ಸ್ವಚ್ಛತೆ ನಮ್ಮ ಆದ್ಯತೆ’ ಎಂಬ ಸಂದೇಶ ನೀಡಿದ್ದಾರೆ.