‘ನಾನು ಏನೇ ಹೇಳಿದರೂ, ಅದನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ಬೇರೆನೋ ಅರ್ಥ ಕಲ್ಪಿಸಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಿಲ್ಲ. ವೇದಿಕೆ ಮೇಲಷ್ಟೆ ಅಭಿಪ್ರಾಯ ತಿಳಿಸುತ್ತೇನೆ. ಬೇಕಾದ್ರೆ ಬರೆದುಕೊಳ್ಳಿ, ಬೇಡವಾದ್ರೆ ಬಿಡಿ’ ಎಂದು ಕುಮಾರಸ್ವಾಮಿ ಹೇಳಿದರು. ‘ಈಗ ಮಾಧ್ಯಮದವರ ಸಮಿತಿ ಮಾಡಿ, ಅವರಿಂದ ಸಲಹೆಗಳನ್ನು ಪಡೆದು, ಮಾತನಾಡುವ ಪರಿಸ್ಥಿತಿಗೆ ಬಂದಿದ್ದೇನೆ’ ಎಂದು ಹೇಳಿದರು.