<p><strong>ಬೆಂಗಳೂರು:</strong> ಸರ್ಕಾರ ಇರೋದರಿಂದಲೇ ವರ್ಗಾವಣೆ ನಡೆಯುತ್ತಿದೆ. ಇದರಲ್ಲಿ ವಿಶೇಷವೇನೂ ಇಲ್ಲ. ವರ್ಗಾವಣೆ ನಿಲ್ಲಿಸಲೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.</p>.<p>ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಮೇಲೆ ಮಾತನಾಡಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಅವರು ಸಮರ್ಥಿಸಿಕೊಂಡರು. ಕಳೆದ 10 ದಿನಗಳಲ್ಲಿ 2,000 ಕ್ಕೂ ಹೆಚ್ಚು ವರ್ಗಾವಣೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.</p>.<p>‘ ನಾನು ಅಮೆರಿಕಾದಲ್ಲಿ ಇದ್ದಾಗ ಇಲ್ಲಿನ ರಾಜಕೀಯ ವಿದ್ಯಮಾನ ಗಮನಕ್ಕೆ ಬಂದಿತು. ಸರ್ಕಾರ ಉಳಿಸಿಕೊಳ್ಳಬೇಕು ಎಂದಿದ್ದರೆ, ತಕ್ಷಣವೇ ಓಡಿ ಬರುತ್ತಿದೆ. ಹಾಗೆಣದು ಗಾಬರಿಯೂ ಆಗಲಿಲ್ಲ. ಏನು ನಡೆಯುತ್ತಿದೆಯೊ ನಡೆಯಲಿ ಎಂದು ಸುಮ್ಮನೆಯೇ ಇದ್ದೆ. ಅಮೆರಿಕಕ್ಕೆ ಹೊರಡುವ ಮೊದಲೇ ಕುತಂತ್ರಗಳು ನಡೆಯುತ್ತಿದೆ ಹೋಗಬೇಡಿ ಎಂದು ಹೇಳಿದ್ದರು. ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ’ ಎಂದೂ ಅವರು ಹೇಳಿದರು.</p>.<p>‘ನಾನೇನು ಪಾಪದ ಕೆಲಸ ಮಾಡಿದ್ದೇನೆ ಹೇಳಿ. ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ಈ ಪದ್ಧತಿ ಎಲ್ಲಿಂದ ಶುರುವಾಯಿತು ಎನ್ನೋದನ್ನು ಬಿಚ್ಚಿಡಲೇ’ ಎಂದು ಕುಮಾರಸ್ವಾಮಿ ಹೇಳಿದರು.</p>.<p>ಆಗ ಮಧ್ಯಪ್ರವೇಶಿಸಿದ ಎಚ್.ಡಿ.ರೇವಣ್ಣ ಮಾತನಾಡಿ, ‘ಯಾರ್ಯಾರ ಕಾಲದಲ್ಲಿ ಪರ್ಸೆಂಟೇಜ್ ನಡೆದಿದೆ ಎಂಬುದನ್ನು ಹೇಳ್ಬೇಕೇನ್ರಿ. ನಾನು ಮಂತ್ರಿ ಆಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಹೇಳಿ. ನಾನೂ ಚರಿತ್ರೆ ಬಿಚ್ಚಿಡಲು ರೆಡಿ ಇದ್ದೇನೆ’ ಎಂದರು.</p>.<p>‘ನಾನು ಯಾರಿಗೂ ಮಂತ್ರಿಗಿರಿ ಹಂಚಲು ಹೋಗಿಲ್ಲ. ಇಂತಹವರಿಗೆ ಇಂತಹ ಖಾತೆ ಕೊಡಿ ಎಂದೂ ಹೇಳಿಲ್ಲ. ನನ್ನ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯ ಉಸಬಾರಿಗೂ ಹೋಗಿಲ್ಲ. ನನ್ನ ಜಿಲ್ಲೆ ಜನ ನೊಂದಿದ್ದಾರೆ. ಅವರಿಗಾಗಿ ಕೆಲಸ ಮಾಡಿದ್ದೇನೆ’ ಎಂದು ರೇವಣ್ಣ ಹೇಳಿದರು.</p>.<p>‘ಸೈನ್ ಹಾಕಿಸದೇ ಕೆಲಸ ಮಾಡಿಸೋ ನ್ಯಾಕ್ ಗೊತ್ತಿರೋದು ರೇವಣ್ಣ ಅವರಿಗೆ ಮಾತ್ರ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ‘ಬಡವರ ಕೆಲಸ ಆಗಬೇಕಿದ್ದರೆ, ಸೈನ್ ಇಲ್ಲದೆಯೂ ಮಾಡಿಸ್ತೀನಿ’ ಎಂದು ರೇವಣ್ಣ ಸಮಜಾಯಿಷಿ ನೀಡಿದರು.</p>.<p><strong>‘2ನೇ ಲವ್ ಲೆಟರ್ ಕಳಿಸಿದ್ದಾರೆ’</strong></p>.<p>‘ರಾಜ್ಯಪಾಲರು ಎರಡನೇ ಲವ್ ಲೆಟರ್ ಕಳಿಸಿದ್ದಾರೆ. ಅದರಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದೂ ಉಲ್ಲೇಖಿಸಿದ್ದಾರೆ. ರಾಜ್ಯಪಾಲರಿಗೆ 10 ದಿನಗಳ ಬಳಿಕ ಜ್ಞಾನೋದಯವಾಗಿದೆಯೇ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.</p>.<p>‘ಕುದುರೆ ವ್ಯಾಪಾರ ನಡೆಯುತ್ತಿರುವುದು ಟಿ.ವಿ ನೋಡಿದಾಗಲೂ ಅವರ ಗಮನಕ್ಕೆ ಬರಲಿಲ್ಲವೆ ’ ಎಂದೂ ಅವರು ಕುಟುಕಿದರು. ‘ನಾನೂ ಯಾವುದಕ್ಕೂ ಅಂಜುವುದಿಲ್ಲ. ಕದ್ದುಮುಚ್ಚಿ ಮಾಡುವವನೂ ಅಲ್ಲ. ಏನು ಮಾಡುವುದಿದ್ದರೂ ಧೈರ್ಯವಾಗಿ ಮಾಡುವವನು. ರಾಜಕೀಯ ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದೇನೆ. ಒಳ್ಳೆಯದ್ದನ್ನೂ ಮಾಡಿದ್ದೇನೆ. ಹಿಂದೆ ತಂದೆಯವರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದು ತಪ್ಪು ಮಾಡಿದ್ದೇನೆ. ತಂದೆಗೆ ಕಪ್ಪು ಚುಕ್ಕೆ ಇಟ್ಟಿದ್ದೇನೆ’ ಎಂದರು.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/national/karnataka-cm-twice-ignores-652273.html" target="_blank"><strong>‘ಅಧಿಕಾರ’ಕ್ಕಾಗಿ ನಿಲ್ಲದ ಹಗ್ಗಜಗ್ಗಾಟ: ರಾಜ್ಯಪಾಲರಿಗೆ ‘ದೋಸ್ತಿ’ ಸಡ್ಡು</strong></a></p>.<p><strong><a href="https://www.prajavani.net/stories/stateregional/ktk-cm-twice-ignores-guvs-652221.html" target="_blank">ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ</a></strong></p>.<p><a href="https://www.prajavani.net/stories/stateregional/karnataka-assembly-cm-652228.html" target="_blank"><strong>ನ್ಯಾಯ ನಿರ್ಣಯದ ದಿನ ಬಂದೇ ಬರುತ್ತದೆ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಟೀಕೆ</strong></a></p>.<p><a href="https://www.prajavani.net/stories/stateregional/karnataka-floor-test-speaker-652204.html" target="_blank"><strong>ರಾಜ್ಯಪಾಲರ ವಿರುದ್ಧ ಜೆಡಿಎಸ್–ಕಾಂಗ್ರೆಸ್ ಶಾಸಕರು ಕಿಡಿ</strong></a></p>.<p><a href="https://www.prajavani.net/district/bengaluru-city/bjp-aptbandhava-652262.html" target="_blank"><strong>ಬಿಜೆಪಿ ಮೇಲಿನ ದಾಳಿಗೆ ಮಾಧುಸ್ವಾಮಿ ‘ತಡೆಗೋಡೆ’</strong></a></p>.<p><a href="https://www.prajavani.net/stories/national/assembly-speaker-652225.html" target="_blank"><strong>ದರಿದ್ರ, ಹೊಲಸು ಎಲ್ಲವೂ ಹೊರಗೆ ಬರಲಿ: ಸಭಾಧ್ಯಕ್ಷರ ಆಕ್ರೋಶ</strong></a></p>.<p><a href="https://www.prajavani.net/stories/stateregional/karnataka-assembly-mla-652226.html" target="_blank"><strong>ಉಲ್ಟಾ ಹೊಡೆದ ‘ಗುಳ್ಳೆ ನರಿ ಶಾಸ್ತ್ರ’</strong></a></p>.<p><a href="https://www.prajavani.net/stories/stateregional/karnataka-floor-test-jds-652231.html" target="_blank"><strong>ಸುಪ್ರೀಂ ಕೋರ್ಟ್ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸರ್ಕಾರ ಇರೋದರಿಂದಲೇ ವರ್ಗಾವಣೆ ನಡೆಯುತ್ತಿದೆ. ಇದರಲ್ಲಿ ವಿಶೇಷವೇನೂ ಇಲ್ಲ. ವರ್ಗಾವಣೆ ನಿಲ್ಲಿಸಲೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.</p>.<p>ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯದ ಮೇಲೆ ಮಾತನಾಡಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಅವರು ಸಮರ್ಥಿಸಿಕೊಂಡರು. ಕಳೆದ 10 ದಿನಗಳಲ್ಲಿ 2,000 ಕ್ಕೂ ಹೆಚ್ಚು ವರ್ಗಾವಣೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.</p>.<p>‘ ನಾನು ಅಮೆರಿಕಾದಲ್ಲಿ ಇದ್ದಾಗ ಇಲ್ಲಿನ ರಾಜಕೀಯ ವಿದ್ಯಮಾನ ಗಮನಕ್ಕೆ ಬಂದಿತು. ಸರ್ಕಾರ ಉಳಿಸಿಕೊಳ್ಳಬೇಕು ಎಂದಿದ್ದರೆ, ತಕ್ಷಣವೇ ಓಡಿ ಬರುತ್ತಿದೆ. ಹಾಗೆಣದು ಗಾಬರಿಯೂ ಆಗಲಿಲ್ಲ. ಏನು ನಡೆಯುತ್ತಿದೆಯೊ ನಡೆಯಲಿ ಎಂದು ಸುಮ್ಮನೆಯೇ ಇದ್ದೆ. ಅಮೆರಿಕಕ್ಕೆ ಹೊರಡುವ ಮೊದಲೇ ಕುತಂತ್ರಗಳು ನಡೆಯುತ್ತಿದೆ ಹೋಗಬೇಡಿ ಎಂದು ಹೇಳಿದ್ದರು. ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ’ ಎಂದೂ ಅವರು ಹೇಳಿದರು.</p>.<p>‘ನಾನೇನು ಪಾಪದ ಕೆಲಸ ಮಾಡಿದ್ದೇನೆ ಹೇಳಿ. ಪರ್ಸೆಂಟೇಜ್ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ಈ ಪದ್ಧತಿ ಎಲ್ಲಿಂದ ಶುರುವಾಯಿತು ಎನ್ನೋದನ್ನು ಬಿಚ್ಚಿಡಲೇ’ ಎಂದು ಕುಮಾರಸ್ವಾಮಿ ಹೇಳಿದರು.</p>.<p>ಆಗ ಮಧ್ಯಪ್ರವೇಶಿಸಿದ ಎಚ್.ಡಿ.ರೇವಣ್ಣ ಮಾತನಾಡಿ, ‘ಯಾರ್ಯಾರ ಕಾಲದಲ್ಲಿ ಪರ್ಸೆಂಟೇಜ್ ನಡೆದಿದೆ ಎಂಬುದನ್ನು ಹೇಳ್ಬೇಕೇನ್ರಿ. ನಾನು ಮಂತ್ರಿ ಆಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಹೇಳಿ. ನಾನೂ ಚರಿತ್ರೆ ಬಿಚ್ಚಿಡಲು ರೆಡಿ ಇದ್ದೇನೆ’ ಎಂದರು.</p>.<p>‘ನಾನು ಯಾರಿಗೂ ಮಂತ್ರಿಗಿರಿ ಹಂಚಲು ಹೋಗಿಲ್ಲ. ಇಂತಹವರಿಗೆ ಇಂತಹ ಖಾತೆ ಕೊಡಿ ಎಂದೂ ಹೇಳಿಲ್ಲ. ನನ್ನ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯ ಉಸಬಾರಿಗೂ ಹೋಗಿಲ್ಲ. ನನ್ನ ಜಿಲ್ಲೆ ಜನ ನೊಂದಿದ್ದಾರೆ. ಅವರಿಗಾಗಿ ಕೆಲಸ ಮಾಡಿದ್ದೇನೆ’ ಎಂದು ರೇವಣ್ಣ ಹೇಳಿದರು.</p>.<p>‘ಸೈನ್ ಹಾಕಿಸದೇ ಕೆಲಸ ಮಾಡಿಸೋ ನ್ಯಾಕ್ ಗೊತ್ತಿರೋದು ರೇವಣ್ಣ ಅವರಿಗೆ ಮಾತ್ರ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ‘ಬಡವರ ಕೆಲಸ ಆಗಬೇಕಿದ್ದರೆ, ಸೈನ್ ಇಲ್ಲದೆಯೂ ಮಾಡಿಸ್ತೀನಿ’ ಎಂದು ರೇವಣ್ಣ ಸಮಜಾಯಿಷಿ ನೀಡಿದರು.</p>.<p><strong>‘2ನೇ ಲವ್ ಲೆಟರ್ ಕಳಿಸಿದ್ದಾರೆ’</strong></p>.<p>‘ರಾಜ್ಯಪಾಲರು ಎರಡನೇ ಲವ್ ಲೆಟರ್ ಕಳಿಸಿದ್ದಾರೆ. ಅದರಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದೂ ಉಲ್ಲೇಖಿಸಿದ್ದಾರೆ. ರಾಜ್ಯಪಾಲರಿಗೆ 10 ದಿನಗಳ ಬಳಿಕ ಜ್ಞಾನೋದಯವಾಗಿದೆಯೇ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.</p>.<p>‘ಕುದುರೆ ವ್ಯಾಪಾರ ನಡೆಯುತ್ತಿರುವುದು ಟಿ.ವಿ ನೋಡಿದಾಗಲೂ ಅವರ ಗಮನಕ್ಕೆ ಬರಲಿಲ್ಲವೆ ’ ಎಂದೂ ಅವರು ಕುಟುಕಿದರು. ‘ನಾನೂ ಯಾವುದಕ್ಕೂ ಅಂಜುವುದಿಲ್ಲ. ಕದ್ದುಮುಚ್ಚಿ ಮಾಡುವವನೂ ಅಲ್ಲ. ಏನು ಮಾಡುವುದಿದ್ದರೂ ಧೈರ್ಯವಾಗಿ ಮಾಡುವವನು. ರಾಜಕೀಯ ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದೇನೆ. ಒಳ್ಳೆಯದ್ದನ್ನೂ ಮಾಡಿದ್ದೇನೆ. ಹಿಂದೆ ತಂದೆಯವರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದು ತಪ್ಪು ಮಾಡಿದ್ದೇನೆ. ತಂದೆಗೆ ಕಪ್ಪು ಚುಕ್ಕೆ ಇಟ್ಟಿದ್ದೇನೆ’ ಎಂದರು.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/national/karnataka-cm-twice-ignores-652273.html" target="_blank"><strong>‘ಅಧಿಕಾರ’ಕ್ಕಾಗಿ ನಿಲ್ಲದ ಹಗ್ಗಜಗ್ಗಾಟ: ರಾಜ್ಯಪಾಲರಿಗೆ ‘ದೋಸ್ತಿ’ ಸಡ್ಡು</strong></a></p>.<p><strong><a href="https://www.prajavani.net/stories/stateregional/ktk-cm-twice-ignores-guvs-652221.html" target="_blank">ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ</a></strong></p>.<p><a href="https://www.prajavani.net/stories/stateregional/karnataka-assembly-cm-652228.html" target="_blank"><strong>ನ್ಯಾಯ ನಿರ್ಣಯದ ದಿನ ಬಂದೇ ಬರುತ್ತದೆ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಟೀಕೆ</strong></a></p>.<p><a href="https://www.prajavani.net/stories/stateregional/karnataka-floor-test-speaker-652204.html" target="_blank"><strong>ರಾಜ್ಯಪಾಲರ ವಿರುದ್ಧ ಜೆಡಿಎಸ್–ಕಾಂಗ್ರೆಸ್ ಶಾಸಕರು ಕಿಡಿ</strong></a></p>.<p><a href="https://www.prajavani.net/district/bengaluru-city/bjp-aptbandhava-652262.html" target="_blank"><strong>ಬಿಜೆಪಿ ಮೇಲಿನ ದಾಳಿಗೆ ಮಾಧುಸ್ವಾಮಿ ‘ತಡೆಗೋಡೆ’</strong></a></p>.<p><a href="https://www.prajavani.net/stories/national/assembly-speaker-652225.html" target="_blank"><strong>ದರಿದ್ರ, ಹೊಲಸು ಎಲ್ಲವೂ ಹೊರಗೆ ಬರಲಿ: ಸಭಾಧ್ಯಕ್ಷರ ಆಕ್ರೋಶ</strong></a></p>.<p><a href="https://www.prajavani.net/stories/stateregional/karnataka-assembly-mla-652226.html" target="_blank"><strong>ಉಲ್ಟಾ ಹೊಡೆದ ‘ಗುಳ್ಳೆ ನರಿ ಶಾಸ್ತ್ರ’</strong></a></p>.<p><a href="https://www.prajavani.net/stories/stateregional/karnataka-floor-test-jds-652231.html" target="_blank"><strong>ಸುಪ್ರೀಂ ಕೋರ್ಟ್ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>