<p><strong>ರಾಜರಾಜೇಶ್ವರಿನಗರ:</strong> ಹಲವಾರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಕಂಪನಿಗಳಿಗೆ, ಹೋಟೆಲ್ಗಳಿಗೆ ಮತ್ತು ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿ ಬೀಗ ಹಾಕಿದ್ದಾರೆ.</p>.<p>ಪೀಣ್ಯದ ಶಕ್ತಿ ಇಂಡಸ್ಟ್ರೀಸ್ ₹32 ಲಕ್ಷ, ಶರವಣ ಐರನ್ ಅಲಯನ್ಸ್ ₹32 ಲಕ್ಷ, ಮುರಳೀಧರ ಡಿಸ್ಟಿಲರೀಸ್ ₹32 ಲಕ್ಷ, ಶಿವಬೋಜ್ ಹೋಟೆಲ್ ₹32 ಲಕ್ಷ, ಜ್ಞಾನಭಾರತಿ ಬಡಾವಣೆಯ ಮೆಡ್ಸಾಲ್ ಆಸ್ಪತ್ರೆ, ಜೈನ್ ಚಾರಿಟಬಲ್ ಟ್ರಸ್ಟ್ ₹32.42 ಲಕ್ಷ, ಮೈಸೂರು ರಸ್ತೆಯ ಲೀಲಾ ಸ್ಕಾಟಿಸ್ ಪ್ರೈವೇಟ್ ಲಿಮಿಟೆಡ್ ₹1.53 ಕೋಟಿ, ಮೈಲಸಂದ್ರದ ಟ್ಯಾಂಗ್ಲಿನ್ ಡೆವಲಪ್ಮೆಂಟ್ಸ್ ಪ್ರೈ.ಲಿ. ₹13.79 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವು.</p>.<p>ಮೈಲಸಂದ್ರದ ಟ್ಯಾಂಗ್ಲಿನ್ ಡೆವಲಪ್ಮೆಂಟ್ಸ್ನವರು ಸ್ಥಳದಲ್ಲೇ ₹5.72 ಕೋಟಿ ಚೆಕ್ ನೀಡಿ ಕಟ್ಟಡಕ್ಕೆ ಬೀಗಮುದ್ರೆ ಹಾಕದಂತೆ ಮನವಿ ಮಾಡಿಕೊಂಡರು. ಮೈಸೂರು ರಸ್ತೆಯ ಲೀಲಾ ಸ್ಕಾಟಿಸ್ ಪ್ರೈವೇಟ್ ಲಿಮಿಟೆಡ್ನ ಮಾಲೀಕರು 5 ವರ್ಷಕ್ಕೂ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ ಪೀಠೋಪಕರಣಗಳನ್ನು ಜಪ್ತಿ ಮಾಡಿ ಕಟ್ಟಡಕ್ಕೆ ಬೀಗ ಹಾಕಲಾಯಿತು.</p>.<p>ಪಾಲಿಕೆಯ ಉಪ ಆಯುಕ್ತ ಕೆ.ಶಿವೇಗೌಡ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳಾದ ಸಂತೋಷ್ಕುಮಾರ್, ಜಿ.ಹನುಮಂತಪ್ಪ, ಬಸವೇಗೌಡ, ಶ್ರೀನಿವಾಸ್ ಕಾರ್ಯಾಚರಣೆ ನಡೆಸಿದರು.</p>.<p>ಕೆ.ಶಿವೇಗೌಡ ಮಾತನಾಡಿ, ‘ಬಾಕಿ ಉಳಿಸಿಕೊಂಡಿರುವವರು ತಿಂಗಳೊಳಗಾಗಿ ತೆರಿಗೆ ಪಾವತಿಸದಿದ್ದರೆ ಬೀಗಮುದ್ರೆ ಹಾಕಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ಹಲವಾರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಕಂಪನಿಗಳಿಗೆ, ಹೋಟೆಲ್ಗಳಿಗೆ ಮತ್ತು ವಾಣಿಜ್ಯ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿ ಬೀಗ ಹಾಕಿದ್ದಾರೆ.</p>.<p>ಪೀಣ್ಯದ ಶಕ್ತಿ ಇಂಡಸ್ಟ್ರೀಸ್ ₹32 ಲಕ್ಷ, ಶರವಣ ಐರನ್ ಅಲಯನ್ಸ್ ₹32 ಲಕ್ಷ, ಮುರಳೀಧರ ಡಿಸ್ಟಿಲರೀಸ್ ₹32 ಲಕ್ಷ, ಶಿವಬೋಜ್ ಹೋಟೆಲ್ ₹32 ಲಕ್ಷ, ಜ್ಞಾನಭಾರತಿ ಬಡಾವಣೆಯ ಮೆಡ್ಸಾಲ್ ಆಸ್ಪತ್ರೆ, ಜೈನ್ ಚಾರಿಟಬಲ್ ಟ್ರಸ್ಟ್ ₹32.42 ಲಕ್ಷ, ಮೈಸೂರು ರಸ್ತೆಯ ಲೀಲಾ ಸ್ಕಾಟಿಸ್ ಪ್ರೈವೇಟ್ ಲಿಮಿಟೆಡ್ ₹1.53 ಕೋಟಿ, ಮೈಲಸಂದ್ರದ ಟ್ಯಾಂಗ್ಲಿನ್ ಡೆವಲಪ್ಮೆಂಟ್ಸ್ ಪ್ರೈ.ಲಿ. ₹13.79 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವು.</p>.<p>ಮೈಲಸಂದ್ರದ ಟ್ಯಾಂಗ್ಲಿನ್ ಡೆವಲಪ್ಮೆಂಟ್ಸ್ನವರು ಸ್ಥಳದಲ್ಲೇ ₹5.72 ಕೋಟಿ ಚೆಕ್ ನೀಡಿ ಕಟ್ಟಡಕ್ಕೆ ಬೀಗಮುದ್ರೆ ಹಾಕದಂತೆ ಮನವಿ ಮಾಡಿಕೊಂಡರು. ಮೈಸೂರು ರಸ್ತೆಯ ಲೀಲಾ ಸ್ಕಾಟಿಸ್ ಪ್ರೈವೇಟ್ ಲಿಮಿಟೆಡ್ನ ಮಾಲೀಕರು 5 ವರ್ಷಕ್ಕೂ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡದಲ್ಲಿದ್ದ ಪೀಠೋಪಕರಣಗಳನ್ನು ಜಪ್ತಿ ಮಾಡಿ ಕಟ್ಟಡಕ್ಕೆ ಬೀಗ ಹಾಕಲಾಯಿತು.</p>.<p>ಪಾಲಿಕೆಯ ಉಪ ಆಯುಕ್ತ ಕೆ.ಶಿವೇಗೌಡ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳಾದ ಸಂತೋಷ್ಕುಮಾರ್, ಜಿ.ಹನುಮಂತಪ್ಪ, ಬಸವೇಗೌಡ, ಶ್ರೀನಿವಾಸ್ ಕಾರ್ಯಾಚರಣೆ ನಡೆಸಿದರು.</p>.<p>ಕೆ.ಶಿವೇಗೌಡ ಮಾತನಾಡಿ, ‘ಬಾಕಿ ಉಳಿಸಿಕೊಂಡಿರುವವರು ತಿಂಗಳೊಳಗಾಗಿ ತೆರಿಗೆ ಪಾವತಿಸದಿದ್ದರೆ ಬೀಗಮುದ್ರೆ ಹಾಕಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>