ಈ ಕುರಿತಂತೆ, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ಕ್ಕೆ ರಾಕೇಶ್ ಪರ ವಕೀಲರು ಶನಿವಾರ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ದೂರುದಾರರು ಈ ರೀತಿ ಅರ್ಜಿ ಹಿಂಪಡೆಯುತ್ತಿರುವುದು ಕಾನೂನಿನ ದುರುಪಯೋಗ ಮಾಡಿದಂತೆ. ಅಲ್ಲದೆ, ಕೋರ್ಟ್ ಸಮಯವನ್ನು ವ್ಯರ್ಥಗೊಳಿಸಿದಂತಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.