ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸದಾಶಿವ, ಠಾಣೆ ವ್ಯಾಪ್ತಿಯಲ್ಲಿ ಮಫ್ತಿಯಲ್ಲೇ ಗಸ್ತು ತಿರಗುತ್ತಿದ್ದರು. ನಾಲ್ಕನೇ ಹಂತದಲ್ಲಿರುವ ರೆಸ್ಟೊರೆಂಟ್ ಎದುರು ನಿಂತಿದ್ದ ಕೆಲಸಗಾರರು ಹಾಗೂ ಗ್ರಾಹಕರು, ಪರಸ್ಪರ ಗಲಾಟೆ ಮಾಡುತ್ತಿದ್ದರು. ಅದನ್ನು ಗಮನಿಸಿದ್ದ ಸದಾಶಿವ, ‘ರಸ್ತೆಯಲ್ಲಿ ನಿಂತು ಗಲಾಟೆ ಮಾಡಬೇಡಿ. ಒಳಗೆ ಹೋಗಿ’ ಎಂದಿದ್ದರೆಂದು ಹಿರಿಯ ಅಧಿಕಾರಿ ಹೇಳಿದರು.