ರೇಷ್ಮೆ ಸೀರೆ ನೇಕಾರಿಕೆಯಲ್ಲಿ ಪಾವಗಡ ಹೊಸಕೋಟೆಯ ಎಂ. ಜಯಕೀರ್ತೀ ಪ್ರಥಮ, ಚಿಂತಾಮಣಿ ತಿಮ್ಮಸಂದ್ರದ ಮಂಜುನಾಥ ಟಿ.ಎಂ. ದ್ವಿತೀಯ ಸ್ಥಾನ, ಹತ್ತಿ ನೇಕಾರಿಕೆಯಲ್ಲಿ ಇಳಕಲ್ ಪದ್ಮಾ ವಿಠಲ ಗಂಜಿ ಪ್ರಥಮ, ಕಿನ್ನಿಗೋಳಿ ಸಂಜೀವ ಶೆಟ್ಟಿಗಾರ್ ದ್ವಿತೀಯ, ಉಣ್ಣೆ ನೇಕಾರಿಕೆಯಲ್ಲಿ ಮೊಳಕಾಲ್ಮುರು ಕೊಂಡ್ಲಹಳ್ಳಿ ಬಿ.ಟಿ. ತಿಪ್ಪೇಸ್ವಾಮಿ ಪ್ರಥಮ ಸ್ಥಾನ ಪಡೆದರು. ಬಾಳೆ, ದಾಸವಾಳಗಳ ನೂಲು, ಲಾವಂಚ ಬೇರಿನ ನೂಲುಗಳನ್ನು ಬಳಸಿ ಹಾಸು, ಹೊದಿಕೆಗಳನ್ನು ತಯಾರಿಸಿದ ಕನಕಪುರ ಸಾತನೂರಿನ ಬಾಲಾಜಿ ಜಿ.ಎನ್. ಅವರನ್ನು ಪ್ರೋತ್ಸಾಹಿಸಲಾಯಿತು.