ಮೂರು ದಿನಗಳ ಹಿಂದೆ ಕಾನ್ಸ್ಟೆಬಲ್ಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರು ಟಿಪ್ಪುನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಾಹಿತಿ ಪಡೆದ ವೈದ್ಯರು, ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಕೋವಿಡ್ 19 ಪರೀಕ್ಷೆಗೆ ಕಳುಹಿಸಿದ್ದರು. ಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್) ಸೂಚಿಸಿದ್ದರು. ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಕಾನ್ಸ್ಟೆಬಲ್ ಸೋಂಕು ಹೊಂದಿರುವುದು ಧೃಡಪಟ್ಟಿತ್ತು.