‘ಭಾನುವಾರ ಮಧ್ಯರಾತ್ರಿ ತಂಗಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ರಾತ್ರಿ 2 ಗಂಟೆ ವೇಳೆಗೆ ಹೋದೆವು. ಅರ್ಧ ತಾಸು ಕಾದರೂ ಯಾರೂ ಬಂದು ವಿಚಾರಿಸಿಲಿಲ್ಲ. ಜೋರಾಗಿ ಕೂಗಾಡಿದಾಗ ಆಸ್ಪತ್ರೆ ಸಿಬ್ಬಂದಿ ಬಂದು ಕೊರೊನಾ ವರದಿ ತರುವಂತೆ ಹೇಳಿದರು. ಸ್ಕ್ಯಾನ್ ಕೂಡ ಮಾಡಿಸುವಂತೆ ಹೇಳಿದರು. ಅಷ್ಟು ಮಧ್ಯರಾತ್ರಿಯಲ್ಲಿ ಯಾರ ಬಳಿ ಸ್ಕ್ಯಾನ್ ಮಾಡಿಸಬೇಕು. ಆದರೂ, ವಾಣಿವಿಲಾಸ್ ಆಸ್ಪತ್ರೆ, ಶ್ರೀರಾಮಪುರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿಯೂ ದಾಖಲಿಸಿಕೊಳ್ಳಲಿಲ್ಲ’ ಎಂದು ಮಹಿಳೆಯ ಅಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.