ಬೆಂಗಳೂರು: ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸಿದ್ದು ನಿಜಕನಸು ಕೃತಿ ಬಿಡುಗಡೆ ಸಮಾರಂಭ ಮುಂದೂಡಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ತಡೆಯಾಜ್ಞೆ ತೆರವಿಗೆ ಪುಸ್ತಕ ಬರೆದವರು ಪ್ರಯತ್ನಿಸಲಿದ್ದಾರೆ. ಬಿಜೆಪಿಗೂ ಪುಸ್ತಕ ಹೊರತರಲು ಮುಂದಾಗಿರುವ ಸಂಸ್ಥೆಗೂ ಸಂಬಂಧ ಇಲ್ಲ. ನನಗೂ ಕೃತಿ ಕುರಿತು ಕುತೂಹಲ ಇದೆ ಎಂದರು. ಸಿದ್ದರಾಮಯ್ಯಗೆ ಭಯ ಏಕೆ ಎಂದು ಪ್ರಶ್ನಿಸಿದರು.