ಸಂಘದ ಅಧ್ಯಕ್ಷ ಸಿ.ಆರ್.ಜನಾರ್ದನ್, ‘ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಲು ಕೈಗಾರಿಕೆಗಳು ಕಾರಣವಲ್ಲ. ಯಾವುದೋ ಒಂದೆರಡು ಕೈಗಾರಿಕೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಬಂದಿರಬಹುದು. ಶೇಕಡಾ 20ರಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಮತ್ತೊಮ್ಮೆ ಲಾಕ್ಡೌನ್ನಿಂದ ಇನ್ನಷ್ಟು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ‘ ಎಂದಿದ್ದಾರೆ.