ಬೆಂಗಳೂರು: ಮಲ್ಲೇಶ್ವರದ ಪ್ರಾಥಮಿಕ ಆರೈಕೆ ಕೇಂದ್ರ, ಬೆಳವಲ್ಲ್ ಫೌಂಡೇಷನ್, ಇತರ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ಸೇವಾ ಸಮಿತಿ ಸಭಾಂಗಣದಲ್ಲಿ ಹಗಲು ಸೇವಾ ಕೇಂದ್ರ ಆರಂಭವಾಗಿದೆ.
40 ಹಾಸಿಗೆಗಳ ಈ ಕೇಂದ್ರದಲ್ಲಿ ಆಮ್ಲಜನಕ, ಔಷಧ, ಆತ್ಮಸ್ಥೈರ್ಯ ಮತ್ತು ಜಾಗೃತಿ ಬಗ್ಗೆ ಮಾಹಿತಿ ನೀಡುವ ಆಪ್ತ ಸಮಾಲೋಚಕರ ತಂಡ ಈ ಸೇವಾ ಕೇಂದ್ರದಲ್ಲಿ ಇದೆ. ಕೋವಿಡ್ 3ನೇ ಅಲೆ, ಕಪ್ಪು ಶಿಲೀಂದ್ರ ಹಾಗೂ ಇತರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ದೂರವಾಣಿ ಸಂಖ್ಯೆ 96867–00385ಗೆ ಕರೆ ಮಾಡಬಹುದು ಎಂದು ವಿವರಿಸಿದೆ.