ರಾಜನಹಳ್ಳಿ ಮುಖ್ಯರಸ್ತೆಯ ಥಣಿಸಂದ್ರದ ನವಗ್ರಹ ಅಪಾರ್ಟ್ಮೆಂಟ್ ಸಮುಚ್ಚಯದ ಕ್ಲಸ್ಟರ್ನಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಸೋಂಕು ದೃಢಪಟ್ಟವರು ಒಂದು ವಾರದ ಹಿಂದೆ ತಿರುಪತಿಗೆ ಹೋಗಿ ಬಂದಿದ್ದರು. ಈ ಪೈಕಿ ಮೊದಲು ಒಬ್ಬರಲ್ಲಿ ಕೆಮ್ಮು, ಶೀತ ಕಾಣಿಸಿಕೊಂಡ ಕಾರಣ ಸೋಂಕು ಪರೀಕ್ಷೆಗೆ ಒಳಗಾಗಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ವ್ಯಕ್ತಿಯು ತಮ್ಮೊಂದಿಗೆ ಇದ್ದ ಕುಟುಂಬ ಸದಸ್ಯರಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದರು. ಆಗ ಕುಟುಂಬದ ಎಲ್ಲರೂ ಸೋಂಕು ಪರೀಕ್ಷೆಗೆ ಒಳಗಾಗಿದ್ದರು.