<p><strong>ಬೆಂಗಳೂರು:</strong> ಬಿಬಿಎಂಪಿಯ ಪ್ರಸಕ್ತ ಆಡಳಿತದ ಅವಧಿ ಸೆ.10ಕ್ಕೆ ಮುಗಿಯಲಿದೆ. ಒಂದು ವರ್ಷದಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ‘ಹೋಗುವ ಮುನ್ನ ಲೆಕ್ಕ ಕೊಟ್ಟು ಹೋಗಿ’ ಎಂಬ ಅಭಿಯಾನವನ್ನು ಸಿಪಿಐ (ಎಂ) ಆರಂಭಿಸಿದೆ. ಈ ಒತ್ತಾಯವನ್ನು ಮುಂದಿಟ್ಟುಕೊಂಡು ಸೆ.9ರಂದು ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಇತರೆ ವಲಯ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ಪಕ್ಷ ಮುಂದಾಗಿದೆ.</p>.<p>‘ಬಿಜೆಪಿ ಆಡಳಿತವು ಕೋವಿಡ್ ಪರಿಸ್ಥಿತಿ ನಿರ್ವಹಣೆ ಮತ್ತು ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಲೆಕ್ಕ ಕೊಡಬೇಕು. ಇದಕ್ಕೆ ಸಂಬಂಧಿಸಿದಂತೆ ಹತ್ತು ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು’ ಎಂದು ಪಕ್ಷದ ಬೆಂಗಳೂರು ವಿಭಾಗದ ಕಾರ್ಯದರ್ಶಿಗಳಾದ ಕೆ.ಎನ್. ಉಮೇಶ್, ಎನ್. ಪ್ರತಾಪಸಿಂಹ ಒತ್ತಾಯಿಸಿದ್ದಾರೆ.</p>.<p class="Briefhead"><strong>ಬಿಜೆಪಿಗೆ ಸಿಪಿಐ ಪ್ರಶ್ನೆಗಳು</strong></p>.<p>* ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆಯಿಂದ ಎಷ್ಟು ಆಹಾರ ಕಿಟ್ಗಳನ್ನು ನೀಡಲಾಗಿತ್ತು ? ಫಲಾನುಭವಿಗಳ ಪಟ್ಟಿ ಕೊಡಿ.</p>.<p>* 2020–21ರ ಬಿಬಿಎಂಪಿ ಬಜೆಟ್ನಲ್ಲಿ ಮೇಯರ್ ವಿವೇಚನಾ ನಿಧಿಯ ₹150 ಕೋಟಿ, ಉಪಮೇಯರ್ ಅವರ ₹75 ಕೋಟಿ, ಆಡಳಿತ ಪಕ್ಷದ ನಾಯಕರ ₹75 ಕೋಟಿ, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನಾ ನಿಧಿಯ ₹75 ಕೋಟಿಯ ಲೆಕ್ಕ ನೀಡಿ.</p>.<p>* ಅಸಂಘಟಿತ ಕಾರ್ಮಿಕರಿಗೆ ಈ ವಿವೇಚನಾ ನಿಧಿಯಿಂದ ಲಾಕ್ಡೌನ್ ಕಾಲಾವಧಿಯ ಪರಿಹಾರ ನೆರವು ಏಕೆ ನೀಡಲಿಲ್ಲ ?</p>.<p>* ಕೋವಿಡ್ ನಿಯಂತ್ರಣಕ್ಕಾಗಿ ಎಷ್ಟು ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿತ್ತು ? ಈ ವಲಯಗಳಲ್ಲಿ ತಡೆಗೋಡೆ ನಿರ್ಮಿಸಲು ಒಟ್ಟು ಎಷ್ಟು ಖರ್ಚು ಮಾಡಲಾಗಿದೆ ?</p>.<p>*ಪಿಎಂ ಕೇರ್ಸ್ ನಿಧಿಯಿಂದ ಬಿಬಿಎಂಪಿಗೆ ಎಷ್ಟು ಹಣ ಬಂದಿದೆ?</p>.<p>* ಕೋವಿಡ್ನಿಂದ ಸಾವಿಗೀಡಾದವರ ಶವಸಂಸ್ಕಾರಕ್ಕೆ ಎಷ್ಟು ಹಣ ನೀಡಲಾಗಿದೆ ? ಒಟ್ಟು ಎಷ್ಟು ಹಣ ಖರ್ಚು ಮಾಡಲಾಗಿದೆ ?</p>.<p>* ಲಾಕ್ಡೌನ್ ಅವಧಿಯಲ್ಲಿ ಕೈಗೊಂಡ ಪರಿಹಾರ ಕ್ರಮಗಳಿಗೆ ಮಾಡಲಾದ ವೆಚ್ಚದ ಲೆಕ್ಕ ಕೊಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಬಿಎಂಪಿಯ ಪ್ರಸಕ್ತ ಆಡಳಿತದ ಅವಧಿ ಸೆ.10ಕ್ಕೆ ಮುಗಿಯಲಿದೆ. ಒಂದು ವರ್ಷದಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ‘ಹೋಗುವ ಮುನ್ನ ಲೆಕ್ಕ ಕೊಟ್ಟು ಹೋಗಿ’ ಎಂಬ ಅಭಿಯಾನವನ್ನು ಸಿಪಿಐ (ಎಂ) ಆರಂಭಿಸಿದೆ. ಈ ಒತ್ತಾಯವನ್ನು ಮುಂದಿಟ್ಟುಕೊಂಡು ಸೆ.9ರಂದು ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಇತರೆ ವಲಯ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ಪಕ್ಷ ಮುಂದಾಗಿದೆ.</p>.<p>‘ಬಿಜೆಪಿ ಆಡಳಿತವು ಕೋವಿಡ್ ಪರಿಸ್ಥಿತಿ ನಿರ್ವಹಣೆ ಮತ್ತು ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಲೆಕ್ಕ ಕೊಡಬೇಕು. ಇದಕ್ಕೆ ಸಂಬಂಧಿಸಿದಂತೆ ಹತ್ತು ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು’ ಎಂದು ಪಕ್ಷದ ಬೆಂಗಳೂರು ವಿಭಾಗದ ಕಾರ್ಯದರ್ಶಿಗಳಾದ ಕೆ.ಎನ್. ಉಮೇಶ್, ಎನ್. ಪ್ರತಾಪಸಿಂಹ ಒತ್ತಾಯಿಸಿದ್ದಾರೆ.</p>.<p class="Briefhead"><strong>ಬಿಜೆಪಿಗೆ ಸಿಪಿಐ ಪ್ರಶ್ನೆಗಳು</strong></p>.<p>* ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆಯಿಂದ ಎಷ್ಟು ಆಹಾರ ಕಿಟ್ಗಳನ್ನು ನೀಡಲಾಗಿತ್ತು ? ಫಲಾನುಭವಿಗಳ ಪಟ್ಟಿ ಕೊಡಿ.</p>.<p>* 2020–21ರ ಬಿಬಿಎಂಪಿ ಬಜೆಟ್ನಲ್ಲಿ ಮೇಯರ್ ವಿವೇಚನಾ ನಿಧಿಯ ₹150 ಕೋಟಿ, ಉಪಮೇಯರ್ ಅವರ ₹75 ಕೋಟಿ, ಆಡಳಿತ ಪಕ್ಷದ ನಾಯಕರ ₹75 ಕೋಟಿ, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನಾ ನಿಧಿಯ ₹75 ಕೋಟಿಯ ಲೆಕ್ಕ ನೀಡಿ.</p>.<p>* ಅಸಂಘಟಿತ ಕಾರ್ಮಿಕರಿಗೆ ಈ ವಿವೇಚನಾ ನಿಧಿಯಿಂದ ಲಾಕ್ಡೌನ್ ಕಾಲಾವಧಿಯ ಪರಿಹಾರ ನೆರವು ಏಕೆ ನೀಡಲಿಲ್ಲ ?</p>.<p>* ಕೋವಿಡ್ ನಿಯಂತ್ರಣಕ್ಕಾಗಿ ಎಷ್ಟು ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿತ್ತು ? ಈ ವಲಯಗಳಲ್ಲಿ ತಡೆಗೋಡೆ ನಿರ್ಮಿಸಲು ಒಟ್ಟು ಎಷ್ಟು ಖರ್ಚು ಮಾಡಲಾಗಿದೆ ?</p>.<p>*ಪಿಎಂ ಕೇರ್ಸ್ ನಿಧಿಯಿಂದ ಬಿಬಿಎಂಪಿಗೆ ಎಷ್ಟು ಹಣ ಬಂದಿದೆ?</p>.<p>* ಕೋವಿಡ್ನಿಂದ ಸಾವಿಗೀಡಾದವರ ಶವಸಂಸ್ಕಾರಕ್ಕೆ ಎಷ್ಟು ಹಣ ನೀಡಲಾಗಿದೆ ? ಒಟ್ಟು ಎಷ್ಟು ಹಣ ಖರ್ಚು ಮಾಡಲಾಗಿದೆ ?</p>.<p>* ಲಾಕ್ಡೌನ್ ಅವಧಿಯಲ್ಲಿ ಕೈಗೊಂಡ ಪರಿಹಾರ ಕ್ರಮಗಳಿಗೆ ಮಾಡಲಾದ ವೆಚ್ಚದ ಲೆಕ್ಕ ಕೊಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>