<p><strong>ಬೆಂಗಳೂರು:</strong> ‘ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಗೊತ್ತು ಗುರಿ ಇಲ್ಲದ ಕ್ರಮಗಳಿಗೆ ಬೆಂಗಳೂರಿನ ಜನರು ಬಲಿಯಾಗುತ್ತಿದ್ದಾರೆ’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.</p>.<p>‘ಕೋವಿಡ್ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳು ಆರಂಭದಿಂದಲೂ ಸ್ಥಿರವಾಗಿಲ್ಲ. ಸರ್ಕಾರ ದಿನಕ್ಕೊಂದು, ವಾರಕ್ಕೊಂದು ಕ್ರಮ ಕೈಗೊಳ್ಳುತ್ತಿದೆ. ಕಾರ್ಪೊರೇಟ್ ಮತ್ತು ಲಿಕ್ಕರ್ ಲಾಬಿಗೆ ಮಣಿದು ಲಾಕ್ಡೌನ್ ಸಡಿಲಗೊಳಿಸಿದ್ದ ಸರ್ಕಾರ, ಈಗ ನಿಯಂತ್ರಣ ಕಳೆದುಕೊಂಡ ಬಳಿಕ ಮತ್ತೆ ಲಾಕ್ಡೌನ್ ಘೋಷಣೆ ಮಾಡಿದೆ’ ಎಂದು ಅಭಿಪ್ರಾಯಪಟ್ಟಿವೆ.</p>.<p>‘ನಗರದ ಶಾಸಕರು ಮತ್ತು ಸಚಿವರ ನಡುವೆ ಸಮನ್ವಯವೇ ಇಲ್ಲದೆ ಸರ್ಕಾರದಲ್ಲೇ ಎರಡು ಅಧಿಕಾರ ಕೇಂದ್ರಗಳು ಸೃಷ್ಟಿಯಾಗಿದೆ. ಸರ್ಕಾರದಮೇಲಿನ ಆರ್ಎಸ್ಎಸ್ ಹಿಡಿತ, ಕೋವಿಡ್ ನಿರ್ವಹಣೆಯ ಹೊಣೆಯನ್ನು ದಿನಕ್ಕೊಬ್ಬ ಸಚಿವರಿಗೆ ಕೊಡುತ್ತಿರುವುದರಿಂದ ಪರಿಸ್ಥಿತಿ ಕೈಮೀರುವಂತೆ ಮಾಡಿದೆ’ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಗೊತ್ತು ಗುರಿ ಇಲ್ಲದ ಕ್ರಮಗಳಿಗೆ ಬೆಂಗಳೂರಿನ ಜನರು ಬಲಿಯಾಗುತ್ತಿದ್ದಾರೆ’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.</p>.<p>‘ಕೋವಿಡ್ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳು ಆರಂಭದಿಂದಲೂ ಸ್ಥಿರವಾಗಿಲ್ಲ. ಸರ್ಕಾರ ದಿನಕ್ಕೊಂದು, ವಾರಕ್ಕೊಂದು ಕ್ರಮ ಕೈಗೊಳ್ಳುತ್ತಿದೆ. ಕಾರ್ಪೊರೇಟ್ ಮತ್ತು ಲಿಕ್ಕರ್ ಲಾಬಿಗೆ ಮಣಿದು ಲಾಕ್ಡೌನ್ ಸಡಿಲಗೊಳಿಸಿದ್ದ ಸರ್ಕಾರ, ಈಗ ನಿಯಂತ್ರಣ ಕಳೆದುಕೊಂಡ ಬಳಿಕ ಮತ್ತೆ ಲಾಕ್ಡೌನ್ ಘೋಷಣೆ ಮಾಡಿದೆ’ ಎಂದು ಅಭಿಪ್ರಾಯಪಟ್ಟಿವೆ.</p>.<p>‘ನಗರದ ಶಾಸಕರು ಮತ್ತು ಸಚಿವರ ನಡುವೆ ಸಮನ್ವಯವೇ ಇಲ್ಲದೆ ಸರ್ಕಾರದಲ್ಲೇ ಎರಡು ಅಧಿಕಾರ ಕೇಂದ್ರಗಳು ಸೃಷ್ಟಿಯಾಗಿದೆ. ಸರ್ಕಾರದಮೇಲಿನ ಆರ್ಎಸ್ಎಸ್ ಹಿಡಿತ, ಕೋವಿಡ್ ನಿರ್ವಹಣೆಯ ಹೊಣೆಯನ್ನು ದಿನಕ್ಕೊಬ್ಬ ಸಚಿವರಿಗೆ ಕೊಡುತ್ತಿರುವುದರಿಂದ ಪರಿಸ್ಥಿತಿ ಕೈಮೀರುವಂತೆ ಮಾಡಿದೆ’ ಎಂದು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>