‘ದೂರುದಾರರ ಮಗ, ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿರುವ ಸಂಸ್ಥೆಯೊಂದರಲ್ಲಿ ತರಬೇತಿಗೆ ಸೇರಿದ್ದರು. ಅಲ್ಲಿಯ ತರಬೇತುದಾರ ಗೌರವ್ ಧಿಮಾನ್, ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ ₹ 12.23 ಲಕ್ಷ ಪಡೆದಿದ್ದರು. ಯಾವುದೇ ಅವಕಾಶ ಕೊಡಿಸಿರಲಿಲ್ಲ. ಹಣ ವಾಪಸು ಕೇಳಿದಾಗ ಜೀವ ಬೆದರಿಕೆಯೊಡ್ಡಿದ್ದರು ಎಂಬುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ’ ಎಂದು ತಿಳಿಸಿವೆ.