ಶಿಕ್ಷಕನಾಗಿದ್ದ ಹಂತಕ: ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಮೋಹನ್ಕುಮಾರ್ ಅಲಿಯಾಸ್ ಸೈನೈಡ್ ಮೋಹನ್ (56), ವೃತ್ತಿಯಲ್ಲಿ ಶಿಕ್ಷಕ ಆಗಿದ್ದ. ಸುಂದರ ರೈ, ಆನಂದ್, ಸುಧಾಕರ್ ಕುಲಾಲ್, ಸುಧಾಕರ ಆಚಾರ್ಯ, ಶಶಿಧರ ಪೂಜಾರಿ, ಜಿ. ಮನೋಹರ, ಶಶಿಧರ ಭಂಡಾರಿ, ಎಸ್. ಆನಂದ್, ಸುಧಾಕರ ರೈ, ಕೆ.ಸಂಜೀದ್, ರಾಜ್ ಪ್ರಕಾಶ್ ಆಚಾರ್ಯ, ಮನೋಜ್, ರಾಜೇಶ್, ಚಂದ್ರಶೇಖರ್... ಹೀಗೆ ನಾನಾ ಹೆಸರುಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ’ ಎಂದು ಅಧಿಕಾರಿ ತಿಳಿಸಿದರು.