ನಕಲಿ ಮಾಲೀಕನಿಂದಲೇ ಶುದ್ಧ ಕ್ರಯಪತ್ರದ ನೋಂದಣಿ ಮಾಡಿಸಿ, ಡಿ.ಡಿ.ಯನ್ನು ಪೂರ್ವಯೋಜಿತವಾಗಿ ಮಲ್ಲೇಶ್ವರದ ಬ್ಯಾಂಕ್ವೊಂದರಲ್ಲಿ ತೆರೆದಿದ್ದ ಬೇನಾಮಿ ಖಾತೆಗೆ ಜಮಾ ಮಾಡಿಕೊಂಡಿದ್ದರು. ಇದರಿಂದ ಗಳಿಸಿದ್ದ ಹಣವನ್ನು ಆರೋಪಿಗಳೆಲ್ಲ ಹಂಚಿಕೊಂಡು, ಬ್ಯಾಂಕಿಗೂ ವಂಚಿಸಿದ್ದರು. ವಂಚನೆಗೆ ಒಳಗಾದವರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.