<p><strong>ಬೆಂಗಳೂರು: </strong>ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳು ವಿ.ವಿ ಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.</p>.<p>ಷಣ್ಮುಖಂ ಮತ್ತು ಶ್ರೀನಿವಾಸ ರೆಡ್ಡಿ ಬಂಧಿತ ಆರೋಪಿಗಳು. ವಿಜಯನಗರದ ನಿವಾಸಿ ಕುರವಟ್ಟಿ ಎಂಬುವರು ನೀಡಿದ ಸುಳಿವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ.</p>.<p>ವಿಕ್ಕ್ಟೋರಿಯಾ ಆಸ್ಪತ್ರೆಯಲ್ಲಿದ್ದತಮ್ಮ ಸಂಬಂಧಿಯನ್ನು ಕಾಣಲುಕುರವಟ್ಟಿಕಳೆದ ವಾರ ಬಂದಿದ್ದರು. ಆದರೆ, ಅವರು ಬೇರೆ ಆಸ್ಪತ್ರೆಗೆ ತೆರಳಿದ್ದ ಮಾಹಿತಿ ಪಡೆದು, ಕ್ಯಾಂಟೀನ್ ಬಳಿ ಬಂದಿದ್ದರು. ಈ ವೇಳೆ ಆರೋಪಿಗಳು ತಮ್ಮನ್ನು ಪರಿಚಯಿಸಿಕೊಂಡಿದ್ದರು.</p>.<p>‘ತಮಗೆ ಕೃಷಿ ಜಮೀನೊಂದರಲ್ಲಿ ನಿಧಿ ಸಿಕ್ಕಿದೆ. ಒಂದು ಕೆ.ಜಿಯಷ್ಟು ಚಿನ್ನದ ನಾಣ್ಯಗಳು ಇದ್ದು, ₹5 ಲಕ್ಷಗಳಿಗೆ ಮಾರಾಟ ಮಾಡುವುದಾಗಿ ನಾಣ್ಯಗಳನ್ನು ತೋರಿಸಿದ್ದರು.ಕೊಳ್ಳುವ ಆಸಕ್ತಿ ಇಲ್ಲ ಎಂದರೂ ನಾಣ್ಯಗಳನ್ನು ಖರೀದಿಸುವಂತೆಕುರವಟ್ಟಿ ಅವರಿಗೆ ಒತ್ತಾಯಿಸಿದ್ದರು‘.</p>.<p>‘ಅದರಂತೆ ಆರೋಪಿಗಳನ್ನು ಕುರವಟ್ಟಿಸೋಮವಾರ ಭೇಟಿಯಾಗಿದ್ದರು. ಈ ವೇಳೆ ಮಣ್ಣಿನೊಂದಿಗೆ ಇದ್ದ ನಕಲಿ ಚಿನ್ನದ ನಾಣ್ಯಗಳನ್ನು ತೋರಿಸಿದ್ದರು. ಇದನ್ನು ನಂಬಿಕುರವಟ್ಟಿ ಮುಂಗಡವಾಗಿ ₹8 ಸಾವಿರ ಪಾವತಿಸಿದ್ದರು. ಉಳಿದ ಹಣ ಬ್ಯಾಂಕಿನಿಂದ ತರುತ್ತೇನೆ. ವಾಪಸ್ ಬರುವವರೆಗೆ ಅಲ್ಲೇ ಇರುವಂತೆ ತಿಳಿಸಿದ್ದರು’.</p>.<p>‘ನಾಣ್ಯಗಳ ಬಗ್ಗೆ ಅನುಮಾನದಿಂದ ವಿ.ವಿ ಪುರ ಪೊಲೀಸರ ಬಳಿ ತೆರಳಿ, ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರು.ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಬಂಧಿಸಿದರು. ನಾಣ್ಯಗಳು ನಕಲಿಯಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳು ವಿ.ವಿ ಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.</p>.<p>ಷಣ್ಮುಖಂ ಮತ್ತು ಶ್ರೀನಿವಾಸ ರೆಡ್ಡಿ ಬಂಧಿತ ಆರೋಪಿಗಳು. ವಿಜಯನಗರದ ನಿವಾಸಿ ಕುರವಟ್ಟಿ ಎಂಬುವರು ನೀಡಿದ ಸುಳಿವಿನಿಂದ ಆರೋಪಿಗಳನ್ನು ಬಂಧಿಸಲಾಗಿದೆ.</p>.<p>ವಿಕ್ಕ್ಟೋರಿಯಾ ಆಸ್ಪತ್ರೆಯಲ್ಲಿದ್ದತಮ್ಮ ಸಂಬಂಧಿಯನ್ನು ಕಾಣಲುಕುರವಟ್ಟಿಕಳೆದ ವಾರ ಬಂದಿದ್ದರು. ಆದರೆ, ಅವರು ಬೇರೆ ಆಸ್ಪತ್ರೆಗೆ ತೆರಳಿದ್ದ ಮಾಹಿತಿ ಪಡೆದು, ಕ್ಯಾಂಟೀನ್ ಬಳಿ ಬಂದಿದ್ದರು. ಈ ವೇಳೆ ಆರೋಪಿಗಳು ತಮ್ಮನ್ನು ಪರಿಚಯಿಸಿಕೊಂಡಿದ್ದರು.</p>.<p>‘ತಮಗೆ ಕೃಷಿ ಜಮೀನೊಂದರಲ್ಲಿ ನಿಧಿ ಸಿಕ್ಕಿದೆ. ಒಂದು ಕೆ.ಜಿಯಷ್ಟು ಚಿನ್ನದ ನಾಣ್ಯಗಳು ಇದ್ದು, ₹5 ಲಕ್ಷಗಳಿಗೆ ಮಾರಾಟ ಮಾಡುವುದಾಗಿ ನಾಣ್ಯಗಳನ್ನು ತೋರಿಸಿದ್ದರು.ಕೊಳ್ಳುವ ಆಸಕ್ತಿ ಇಲ್ಲ ಎಂದರೂ ನಾಣ್ಯಗಳನ್ನು ಖರೀದಿಸುವಂತೆಕುರವಟ್ಟಿ ಅವರಿಗೆ ಒತ್ತಾಯಿಸಿದ್ದರು‘.</p>.<p>‘ಅದರಂತೆ ಆರೋಪಿಗಳನ್ನು ಕುರವಟ್ಟಿಸೋಮವಾರ ಭೇಟಿಯಾಗಿದ್ದರು. ಈ ವೇಳೆ ಮಣ್ಣಿನೊಂದಿಗೆ ಇದ್ದ ನಕಲಿ ಚಿನ್ನದ ನಾಣ್ಯಗಳನ್ನು ತೋರಿಸಿದ್ದರು. ಇದನ್ನು ನಂಬಿಕುರವಟ್ಟಿ ಮುಂಗಡವಾಗಿ ₹8 ಸಾವಿರ ಪಾವತಿಸಿದ್ದರು. ಉಳಿದ ಹಣ ಬ್ಯಾಂಕಿನಿಂದ ತರುತ್ತೇನೆ. ವಾಪಸ್ ಬರುವವರೆಗೆ ಅಲ್ಲೇ ಇರುವಂತೆ ತಿಳಿಸಿದ್ದರು’.</p>.<p>‘ನಾಣ್ಯಗಳ ಬಗ್ಗೆ ಅನುಮಾನದಿಂದ ವಿ.ವಿ ಪುರ ಪೊಲೀಸರ ಬಳಿ ತೆರಳಿ, ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದರು.ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಬಂಧಿಸಿದರು. ನಾಣ್ಯಗಳು ನಕಲಿಯಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>