‘ಚಂದ್ರಾಲೇಔಟ್ ನಿವಾಸಿ ವಿಶ್ವ ಹಾಗೂ ಶಿವಾಜಿನಗರದ ಉಮರ್ ಬಂಧಿತರು. ಅವರಿಂದ 6 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಕೆಲಸ ಹುಡುಕಿಕೊಂಡು ವಿಶಾಖಪಟ್ಟಣಕ್ಕೆ ಹೋಗಿದ್ದ ವಿಶ್ವ, ಅಲ್ಲಿಯೇ ಕೆಲ ವರ್ಷ ನೆಲೆಸಿದ್ದ. ನಂತರ, ಬೆಂಗಳೂರಿಗೆ ವಾಪಸು ಬಂದು ಐಸ್ಕ್ರೀಂ ಮಾರಾಟ ಮಳಿಗೆ ತೆರೆದಿದ್ದ. ಲಾಕ್ಡೌನ್ನಿಂದಾಗಿ ಐಸ್ಕ್ರೀಂ ಬೇಡಿಕೆ ಕುಸಿದು ವ್ಯಾಪಾರ ಇಲ್ಲದಂತಾಗಿತ್ತು. ಹೀಗಾಗಿ, ಆತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ.’
‘ಜೀವನ ನಿರ್ವಹಣೆಗಾಗಿ ಆಟೊ ಚಾಲಕನಾಗಿ ಕೆಲಸ ಮುಂದುವರಿಸಿದ್ದ. ಅದರಿಂದ ಬಂದ ಹಣದಲ್ಲಿ ಜೀವನ ನಡೆಸುವುದು ಕಷ್ಟವಾಗಿತ್ತು. ಅವಾಗಲೇ ಗಾಂಜಾ ಮಾರಾಟಕ್ಕೆ ಇಳಿದಿದ್ದ. ವಿಶಾಖಪಟ್ಟಣದಲ್ಲಿದ್ದ ಪರಿಚಯಸ್ಥರಿಂದ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಅದಕ್ಕಾಗಿ ಸಹಚರ ಉಮರ್ ಸಹಕಾರ ಪಡೆದಿದ್ದ’ ಎಂದೂ ಮೂಲಗಳು ತಿಳಿಸಿವೆ.