<p><strong>ಮೈಸೂರು:</strong> ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.</p>.<p>ಮೈಸೂರಿನಲ್ಲಿ ಶುಕ್ರವಾರ ಬಹುರೂಪಿ ರಾಷ್ಟ್ರೀಯ ನಾಟಕೋ ತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು. ‘ಮುಖ್ಯಮಂತ್ರಿ’ ಚಂದ್ರು ಅವರೂ ಈ ಕಾರ್ಯಕ್ರಮದಲ್ಲಿ ಇದ್ದರು. ಭಾಷಣದ ವೇಳೆ ಸಚಿವರು, ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಹೇಳುವಾಗ ‘ನೀವು ಕೊನೆಯವರೆಗೂ ಶಾಶ್ವತ ಮುಖ್ಯಮಂತ್ರಿಯಾಗಿಯೇ ಇರಿ. ನಮಗೆ ಕನಿಷ್ಠ ಮಾಜಿ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುವ ಭಾಗ್ಯವನ್ನಾದರೂ ಕೊಡಿ’ ಎಂದರು.</p>.<p>ನಾಟಕೋತ್ಸವ ಉದ್ಘಾಟಿಸಿ ನಟ ಅನಂತನಾಗ್ ಮಾತನಾಡು ವಾಗಲೂ ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಪ್ರಸ್ತಾಪಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಚಿವರು, ಅನಂತನಾಗ್ ಉದ್ದೇಶಿಸಿ, ‘ನನ್ನನ್ನು ಕನಿಷ್ಠ ಮಾಜಿ ಮುಖ್ಯ ಮಂತ್ರಿ ಯನ್ನಾಗಿ ಮಾಡಲು ಆಶೀರ್ವದಿಸಿ’ ಎಂದರು. ಅದಕ್ಕೆ ಅನಂತನಾಗ್, ‘ನಿಮ್ಮ ಬಯಕೆ ಯನ್ನು ಚಾಮುಂಡೇಶ್ವರಿ ಈಡೇರಿಸಲಿ’ ಎಂದು ಅವರು ಪ್ರತಿಕ್ರಿಯಿಸಿದರು.</p>.<p>ಕೊನೆಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡುತ್ತಾ, ‘ಆಸೆ ಇದ್ದರೆ ಮಾತ್ರ ಅಧಿಕಾರ ಸಿಗುತ್ತದೆ. ಸಿ.ಟಿ.ರವಿ ಅವರ ಬಯಕೆ ಈಡೇರಲಿ’ ಎಂದರು. ಈ ವೇಳೆ ಎಚ್ಚೆತ್ತ ಸಚಿವರು, ‘ನಾನು ತಮಾಷೆಗೆ ಹೇಳಿದ್ದು. ಅದನ್ನೇ ದೊಡ್ಡದಾಗಿ ಮಾಡಬೇಡಿ’ ಎಂದು ನಗು ಬೀರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ.</p>.<p>ಮೈಸೂರಿನಲ್ಲಿ ಶುಕ್ರವಾರ ಬಹುರೂಪಿ ರಾಷ್ಟ್ರೀಯ ನಾಟಕೋ ತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು. ‘ಮುಖ್ಯಮಂತ್ರಿ’ ಚಂದ್ರು ಅವರೂ ಈ ಕಾರ್ಯಕ್ರಮದಲ್ಲಿ ಇದ್ದರು. ಭಾಷಣದ ವೇಳೆ ಸಚಿವರು, ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಹೇಳುವಾಗ ‘ನೀವು ಕೊನೆಯವರೆಗೂ ಶಾಶ್ವತ ಮುಖ್ಯಮಂತ್ರಿಯಾಗಿಯೇ ಇರಿ. ನಮಗೆ ಕನಿಷ್ಠ ಮಾಜಿ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುವ ಭಾಗ್ಯವನ್ನಾದರೂ ಕೊಡಿ’ ಎಂದರು.</p>.<p>ನಾಟಕೋತ್ಸವ ಉದ್ಘಾಟಿಸಿ ನಟ ಅನಂತನಾಗ್ ಮಾತನಾಡು ವಾಗಲೂ ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಪ್ರಸ್ತಾಪಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಚಿವರು, ಅನಂತನಾಗ್ ಉದ್ದೇಶಿಸಿ, ‘ನನ್ನನ್ನು ಕನಿಷ್ಠ ಮಾಜಿ ಮುಖ್ಯ ಮಂತ್ರಿ ಯನ್ನಾಗಿ ಮಾಡಲು ಆಶೀರ್ವದಿಸಿ’ ಎಂದರು. ಅದಕ್ಕೆ ಅನಂತನಾಗ್, ‘ನಿಮ್ಮ ಬಯಕೆ ಯನ್ನು ಚಾಮುಂಡೇಶ್ವರಿ ಈಡೇರಿಸಲಿ’ ಎಂದು ಅವರು ಪ್ರತಿಕ್ರಿಯಿಸಿದರು.</p>.<p>ಕೊನೆಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡುತ್ತಾ, ‘ಆಸೆ ಇದ್ದರೆ ಮಾತ್ರ ಅಧಿಕಾರ ಸಿಗುತ್ತದೆ. ಸಿ.ಟಿ.ರವಿ ಅವರ ಬಯಕೆ ಈಡೇರಲಿ’ ಎಂದರು. ಈ ವೇಳೆ ಎಚ್ಚೆತ್ತ ಸಚಿವರು, ‘ನಾನು ತಮಾಷೆಗೆ ಹೇಳಿದ್ದು. ಅದನ್ನೇ ದೊಡ್ಡದಾಗಿ ಮಾಡಬೇಡಿ’ ಎಂದು ನಗು ಬೀರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>