‘ಮಳೆ ಬಂದಾಗ ಆಶ್ರಯ ಪಡೆದುಕೊಳ್ಳಲು ಮಂಟಪ ನೆರವಾಗುತ್ತಿತ್ತು. ಇತ್ತೀಚೆಗೆ ಒಂದು ಮಂಟಪ ಕುಸಿದು ಬಿದ್ದಿದೆ. ಜನರಿಲ್ಲದ ವೇಳೆ ಕುಸಿದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಿಸಿರುವ ಮಂಟಪ ಕುಸಿಯುತ್ತದೆ ಎಂದರೆ ಕಳಪೆ ಕಾಮಗಾರಿ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ತನಿಖೆ ನಡೆಯಬೇಕು’ ಎಂದುಕಬ್ಬನ್ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷಎಸ್.ಉಮೇಶ್ ಆಗ್ರಹಿಸಿದರು.