<p><strong>ಬೆಂಗಳೂರು: </strong>ಬ್ಯಾಂಕ್ಗಳು ವಿತರಿಸಿರುವ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳು ನಗರದ ಗ್ರಾಹಕರ ಬಳಿ ಇರುವಾಗಲೇ, ಜಾರ್ಖಂಡ್ ರಾಜ್ಯದ ರಾಂಚಿಯ ಎಟಿಎಂ ಘಟಕದಲ್ಲಿ ಹಣ ಡ್ರಾ ಮಾಡಿ ವಂಚಿಸಲಾಗಿದೆ.</p>.<p>ವಂಚನೆ ಸಂಬಂಧ ಇಬ್ಬರು ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಡ್ನ ಯಾವುದೇ ಮಾಹಿತಿ ನೀಡದಿದ್ದರೂ ಹಣ ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ಗ್ರಾಹಕರು ದೂರಿದ್ದಾರೆ.</p>.<p>‘ನಗರದಲ್ಲಿ ನೆಲೆಸಿರುವ ದೂರುದಾರರ ಬಳಿಯೇ ಕಾರ್ಡ್ಗಳಿವೆ. ಅದರ ಮಾಹಿತಿಯನ್ನೂ ಯಾರೊಂದಿಗೂ ಹಂಚಿಕೊಂಡಿಲ್ಲ. ಅಷ್ಟಾದರೂ ರಾಂಚಿಯಲ್ಲಿ ಹಣ ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಬೆಂಗಳೂರಿನ ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಅಳವಡಿಸಿ ಗ್ರಾಹಕರ ಕಾರ್ಡ್ ಮಾಹಿತಿ ಕದ್ದಿರುವ ಆರೋಪಿಗಳು ಅದನ್ನು ಬಳಸಿಕೊಂಡು ನಕಲಿ ಎಟಿಎಂ ಕಾರ್ಡ್ಗಳನ್ನು ಸೃಷ್ಟಿಸಿಕೊಂಡಿರುವ ಶಂಕೆ ಇದೆ. ತನಿಖೆಯಿಂದ ನಿಜಾಂಶ ತಿಳಿಯಬೇಕಿದೆ’ ಎಂದು ಅಧಿಕಾರಿ ತಿಳಿಸಿದರು.</p>.<p class="Subhead">ಬೈಯಪ್ಪನಹಳ್ಳಿ, ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್: ‘ಎಸ್ಬಿಐ ಬ್ಯಾಂಕ್ನ ಸಿ.ವಿ.ರಾಮನ್ ನಗರ ಶಾಖೆಯಲ್ಲಿ ಖಾತೆ ಹೊಂದಿರುವಪಿ.ಕವಿತಾ ಎಂಬುವರುಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕ್ ನೀಡಿರುವ ಡೆಬಿಟ್ ಕಾರ್ಡ್ ಅವರ ಬಳಿಯೇ ಇದೆ. ಹೀಗಿರುವಾಗಲೇ, ರಾಂಚಿಯ ಎಟಿಎಂ ಘಟಕದಲ್ಲಿ ಜ. 8 ಹಾಗೂ 9ರಂದು ₹ 40 ಸಾವಿರ ಡ್ರಾ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.</p>.<p>‘ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಸಿದ್ದು ಡೊಳ್ಳಿ ಎಂಬುವರಿಗೂ ವಂಚನೆ ಆಗಿದ್ದು, ಆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೆಡಿಟ್ ಕಾರ್ಡ್ ಸಿದ್ದು ಅವರ ಬಳಿಯೇ ಇದ್ದು, ರಾಂಚಿಯಲ್ಲಿ ₹ 82,801 ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.</p>.<p class="Subhead"><strong>₹ 50 ಸಾವಿರ ವಂಚನೆ:</strong> ‘ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ತನಯಾ ಶರ್ಮಾ ಎಂಬುವರಿಗೂ ವಂಚಿಸಲಾಗಿದ್ದು, ಈ ಸಂಬಂಧ ಕಾಡುಗೋಡಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.</p>.<p>‘ಬ್ಯಾಂಕ್ ನೀಡಿರುವ ಡೆಬಿಟ್ ಕಾರ್ಡ್ ತನಯಾ ಅವರ ಬಳಿಯೇ ಇದೆ. ಮಾಹಿತಿಯನ್ನು ಯಾರಿಗೂ ನೀಡಿಲ್ಲ. ಅಷ್ಟಾದರೂ ಅಪರಿಚಿತರು ₹ 50 ಸಾವಿರ ಡ್ರಾ ಮಾಡಿದ್ದಾರೆ’ ಎಂದು ತಿಳಿಸಿದರು.</p>.<p><strong>ಲಿಂಕ್ ತೆರೆದು ₹63,900 ಕಳೆದುಕೊಂಡ</strong><br />ಅಪರಿಚಿತನೊಬ್ಬ ಮೊಬೈಲ್ಗೆ ಕಳುಹಿಸಿದ್ದ ಲಿಂಕ್ ತೆರೆದು ಹಿಮಾನಿ ಶರ್ಮಾ ಎಂಬುವರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಜ. 7ರಂದು ಮಧ್ಯಾಹ್ನ ಅಪರಿಚಿತನೊಬ್ಬ ಹಿಮಾನಿ ಅವರಿಗೆ ಕರೆ ಮಾಡಿದ್ದ. ನಂತರ, ಲಿಂಕ್ ಇದ್ದ ಸಂದೇಶವನ್ನು ಮೊಬೈಲ್ಗೆ ಕಳುಹಿಸಿದ್ದ. ಹಿಮಾನಿ ಅವರು ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಬೇರೊಂದು ಜಾಲತಾಣ ತೆರೆದುಕೊಂಡಿದ್ದ. ಬಳಿಕವೇ ಹಿಮಾನಿ ಅವರ ಎಚ್ಡಿಎಫ್ಸಿ ಡೆಬಿಟ್ ಕಾರ್ಡ್ನಿಂದ ₹ 63,900 ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. ಈ ಸಂಬಂಧ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬ್ಯಾಂಕ್ಗಳು ವಿತರಿಸಿರುವ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳು ನಗರದ ಗ್ರಾಹಕರ ಬಳಿ ಇರುವಾಗಲೇ, ಜಾರ್ಖಂಡ್ ರಾಜ್ಯದ ರಾಂಚಿಯ ಎಟಿಎಂ ಘಟಕದಲ್ಲಿ ಹಣ ಡ್ರಾ ಮಾಡಿ ವಂಚಿಸಲಾಗಿದೆ.</p>.<p>ವಂಚನೆ ಸಂಬಂಧ ಇಬ್ಬರು ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಡ್ನ ಯಾವುದೇ ಮಾಹಿತಿ ನೀಡದಿದ್ದರೂ ಹಣ ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ಗ್ರಾಹಕರು ದೂರಿದ್ದಾರೆ.</p>.<p>‘ನಗರದಲ್ಲಿ ನೆಲೆಸಿರುವ ದೂರುದಾರರ ಬಳಿಯೇ ಕಾರ್ಡ್ಗಳಿವೆ. ಅದರ ಮಾಹಿತಿಯನ್ನೂ ಯಾರೊಂದಿಗೂ ಹಂಚಿಕೊಂಡಿಲ್ಲ. ಅಷ್ಟಾದರೂ ರಾಂಚಿಯಲ್ಲಿ ಹಣ ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಬೆಂಗಳೂರಿನ ಎಟಿಎಂ ಘಟಕಗಳಲ್ಲಿ ಸ್ಕಿಮ್ಮರ್ ಅಳವಡಿಸಿ ಗ್ರಾಹಕರ ಕಾರ್ಡ್ ಮಾಹಿತಿ ಕದ್ದಿರುವ ಆರೋಪಿಗಳು ಅದನ್ನು ಬಳಸಿಕೊಂಡು ನಕಲಿ ಎಟಿಎಂ ಕಾರ್ಡ್ಗಳನ್ನು ಸೃಷ್ಟಿಸಿಕೊಂಡಿರುವ ಶಂಕೆ ಇದೆ. ತನಿಖೆಯಿಂದ ನಿಜಾಂಶ ತಿಳಿಯಬೇಕಿದೆ’ ಎಂದು ಅಧಿಕಾರಿ ತಿಳಿಸಿದರು.</p>.<p class="Subhead">ಬೈಯಪ್ಪನಹಳ್ಳಿ, ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್: ‘ಎಸ್ಬಿಐ ಬ್ಯಾಂಕ್ನ ಸಿ.ವಿ.ರಾಮನ್ ನಗರ ಶಾಖೆಯಲ್ಲಿ ಖಾತೆ ಹೊಂದಿರುವಪಿ.ಕವಿತಾ ಎಂಬುವರುಬೈಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಂಕ್ ನೀಡಿರುವ ಡೆಬಿಟ್ ಕಾರ್ಡ್ ಅವರ ಬಳಿಯೇ ಇದೆ. ಹೀಗಿರುವಾಗಲೇ, ರಾಂಚಿಯ ಎಟಿಎಂ ಘಟಕದಲ್ಲಿ ಜ. 8 ಹಾಗೂ 9ರಂದು ₹ 40 ಸಾವಿರ ಡ್ರಾ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.</p>.<p>‘ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಸಿದ್ದು ಡೊಳ್ಳಿ ಎಂಬುವರಿಗೂ ವಂಚನೆ ಆಗಿದ್ದು, ಆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೆಡಿಟ್ ಕಾರ್ಡ್ ಸಿದ್ದು ಅವರ ಬಳಿಯೇ ಇದ್ದು, ರಾಂಚಿಯಲ್ಲಿ ₹ 82,801 ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.</p>.<p class="Subhead"><strong>₹ 50 ಸಾವಿರ ವಂಚನೆ:</strong> ‘ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ತನಯಾ ಶರ್ಮಾ ಎಂಬುವರಿಗೂ ವಂಚಿಸಲಾಗಿದ್ದು, ಈ ಸಂಬಂಧ ಕಾಡುಗೋಡಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.</p>.<p>‘ಬ್ಯಾಂಕ್ ನೀಡಿರುವ ಡೆಬಿಟ್ ಕಾರ್ಡ್ ತನಯಾ ಅವರ ಬಳಿಯೇ ಇದೆ. ಮಾಹಿತಿಯನ್ನು ಯಾರಿಗೂ ನೀಡಿಲ್ಲ. ಅಷ್ಟಾದರೂ ಅಪರಿಚಿತರು ₹ 50 ಸಾವಿರ ಡ್ರಾ ಮಾಡಿದ್ದಾರೆ’ ಎಂದು ತಿಳಿಸಿದರು.</p>.<p><strong>ಲಿಂಕ್ ತೆರೆದು ₹63,900 ಕಳೆದುಕೊಂಡ</strong><br />ಅಪರಿಚಿತನೊಬ್ಬ ಮೊಬೈಲ್ಗೆ ಕಳುಹಿಸಿದ್ದ ಲಿಂಕ್ ತೆರೆದು ಹಿಮಾನಿ ಶರ್ಮಾ ಎಂಬುವರು ಹಣ ಕಳೆದುಕೊಂಡಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಜ. 7ರಂದು ಮಧ್ಯಾಹ್ನ ಅಪರಿಚಿತನೊಬ್ಬ ಹಿಮಾನಿ ಅವರಿಗೆ ಕರೆ ಮಾಡಿದ್ದ. ನಂತರ, ಲಿಂಕ್ ಇದ್ದ ಸಂದೇಶವನ್ನು ಮೊಬೈಲ್ಗೆ ಕಳುಹಿಸಿದ್ದ. ಹಿಮಾನಿ ಅವರು ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಬೇರೊಂದು ಜಾಲತಾಣ ತೆರೆದುಕೊಂಡಿದ್ದ. ಬಳಿಕವೇ ಹಿಮಾನಿ ಅವರ ಎಚ್ಡಿಎಫ್ಸಿ ಡೆಬಿಟ್ ಕಾರ್ಡ್ನಿಂದ ₹ 63,900 ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. ಈ ಸಂಬಂಧ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>